alex Certify ವಾಯು ಮಾಲಿನ್ಯ ಹಿನ್ನಲೆ: ನಾಳೆಯಿಂದ ಎಲ್ಲ ಶಾಲಾ-ಕಾಲೇಜು ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಯು ಮಾಲಿನ್ಯ ಹಿನ್ನಲೆ: ನಾಳೆಯಿಂದ ಎಲ್ಲ ಶಾಲಾ-ಕಾಲೇಜು ಬಂದ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ವಾತಾವರಣ ಹದಗೆಟ್ಟಿದೆ. ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸುಪ್ರೀಂ ಛಾಟಿ ಏಟಿನ ನಂತ್ರ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶುಕ್ರವಾರದಿಂದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ವಾಯು ಮಾಲಿನ್ಯದ ಹಿನ್ನಲೆಯಲ್ಲಿ ನವೆಂಬರ್ 13ರಿಂದ ಶಾಲೆ-ಕಾಲೇಜುಗಳು ಬಂದ್ ಆಗಿದ್ದವು. ಆದ್ರೆ ನವೆಂಬರ್ 29ರಿಂದ ಮತ್ತೆ ಶಾಲೆ ಶುರುವಾಗಿತ್ತು. ಆದ್ರೀಗ ನಾಳೆಯಿಂದ ಮತ್ತೆ ಶಾಲೆಗಳು ಮುಚ್ಚಲಿವೆ. ಮಾಲಿನ್ಯ ಹೆಚ್ಚಾದ ಕಾರಣ, ಶಾಲೆಗಳನ್ನು ಬಂದ್ ಮಾಡಲಾಗ್ತಿದೆ. ಮುಂದಿನ ಆದೇಶದವರೆಗೆ ಶಾಲೆ ಬಾಗಿಲು ತೆರೆಯುವುದಿಲ್ಲವೆಂದು ದೆಹಲಿ ಸರ್ಕಾರ ಹೇಳಿದೆ.

ಇದಕ್ಕೂ ಮುನ್ನ  ಸಿಜೆಐ ಎನ್‌ವಿ ರಾಮನ್, ದೆಹಲಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಮಾಲಿನ್ಯದ ಹೆಸರಿನಲ್ಲಿ ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡ್ತಿದ್ದಾರೆ. ಶಾಲೆ ಮಕ್ಕಳು ಏಕೆ ಶಾಲೆಗೆ ಬರ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಶಾಲೆ-ಕಾಲೇಜು ನಾಳೆಯಿಂದ ಮುಚ್ಚಲಿದೆ. ಆದ್ರೆ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...