alex Certify ಪ್ರಚಾರದಿಂದ ದೂರವಿರಿ: ಐಪಿಎಸ್​ ಅಧಿಕಾರಿಗಳಿಗೆ ಅಮಿತ್​ ಶಾ ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಚಾರದಿಂದ ದೂರವಿರಿ: ಐಪಿಎಸ್​ ಅಧಿಕಾರಿಗಳಿಗೆ ಅಮಿತ್​ ಶಾ ಕಿವಿಮಾತು

ಭಾರತೀಯ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅದರಲ್ಲೂ ವಿಶೇಷವಾಗಿ ಐಪಿಎಸ್​​ ಅಧಿಕಾರಿಗಳು ಪ್ರಚಾರಗಳಿಂದ ದೂರವೇ ಇರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಎಚ್ಚರಿಕೆ ನೀಡಿದ್ದಾರೆ. ಪ್ರಚಾರದ ಹಂಬಲವು ಸೇವೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ.

ಐಪಿಎಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಿಂದ ದೂರವೇ ಇರಿ. ಪ್ರಚಾರಕ್ಕಾಗಿ ಕೆಲಸ ಮಾಡಬೇಡಿ. ಬಡವ, ದಲಿತ ಹಾಗೂ ಬುಡಕಟ್ಟು ಜನಾಂಗದವರ ಬಗ್ಗೆ ವಿಶೇಷ ಕಾಳಜಿ ಇರಲಿ ಎಂದು ಅಮಿತ್​ ಶಾ ಸಲಹೆ ನೀಡಿದ್ದಾರೆ.

ಪೊಲೀಸರ ವಿರುದ್ಧ ಯಾವುದೇ ಗಂಭೀರ ಕ್ರಮಗಳನ್ನ ಕೈಗೊಂಡಿಲ್ಲ ಎಂಬ ಆರೋಪವಿದೆ. ಪೊಲೀಸರು ಕೆಲಸದ ಕಡೆ ಮಾತ್ರ ಗಮನ ನೀಡುವಂತೆ ಆಗಬೇಕು. ಪೊಲೀಸರು ದೇಶದ ಕಾನೂನನ್ನ ಅರ್ಥ ಮಾಡಿಕೊಂಡು ಸರಿಯಾದ ಹೆಜ್ಜೆ ಇಡಬೇಕು ಎಂದು 72ನೇ ಐಪಿಎಸ್​ ಬ್ಯಾಚ್​​ನ ಪ್ರೊಬೆಷನರಿ ಅವಧಿಯಲ್ಲಿರುವ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುವ ವೇಳೆ ಈ ಸಲಹೆಗಳನ್ನ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...