alex Certify ನಟ ಅಕ್ಷಯ್‌‌ ಕುಮಾರ್ ಹಳೆ ವಿಡಿಯೋ ಹಾಕಿ ನೆಟ್ಟಿಗರಿಂದ ಲೇವಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಅಕ್ಷಯ್‌‌ ಕುಮಾರ್ ಹಳೆ ವಿಡಿಯೋ ಹಾಕಿ ನೆಟ್ಟಿಗರಿಂದ ಲೇವಡಿ

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ನಟಿಸಿರುವ ಚಿತ್ರ ʼಸಾಮ್ರಾಟ್ ಪೃಥ್ವಿರಾಜ್ʼ ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಇಲ್ಲಿಯವರೆಗೆ ಕೇವಲ 48 ಕೋಟಿ ರೂ. ಮಾತ್ರ ಸಂಗ್ರಹಿಸಿದೆ.

ಚಿತ್ರ ಬಿಡುಗಡೆಗೂ ಮುನ್ನ ಅಕ್ಷಯ್ ಮತ್ತು ಮಾನುಷಿ ಜೋಡಿ ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತ್ತು. ಆ ಸಂದರ್ಭದ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಅಕ್ಷಯ್ ಕುಮಾರ್‌ರನ್ನು ಕೆಟ್ಟದಾಗಿ ಬಣ್ಣಿಸುವ ವಿಡಿಯೋ ವೈರಲ್ ಆಗುತ್ತಿದೆ.

ಎರಡು ವಿಡಿಯೊಗಳನ್ನು ಕೊಲಾಜ್ ಮಾಡಿ ಹಾಸ್ಯ ವಿಷಯವಾಗಿ ಮಾಡಲಾಗಿದೆ. ಒಂದು ವಿಡಿಯೊದಲ್ಲಿ ಅಕ್ಷಯ್ ಕುಮಾರ್ ದೇವಾಲಯದ ಪೂಜೆಗಾಗಿ ಹಾಲನ್ನು ವ್ಯರ್ಥ ಮಾಡುವುದರ ಕುರಿತ ಹಳೆಯ ವಿಡಿಯೋ ಮತ್ತೊಂದು ವೀಡಿಯೊದಲ್ಲಿ, ವಾರಣಾಸಿ ಘಾಟ್‌ನಲ್ಲಿ ಆರತಿ ಮಾಡುವುದನ್ನು ಕಾಣಬಹುದು.

ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಆತನದ್ದು ಬೂಟಾಟಿಕೆಗೆ ಎಂದೂ ಕರೆದವರಿದ್ದಾರೆ. ದೇವರಿಗೆ ಹಾಲನ್ನು ವ್ಯರ್ಥ ಮಾಡುವುದರ ಕುರಿತು ಅಕ್ಷಯ್ ಕುಮಾರ್ ಹಳೆ ವಿಡಿಯೋದಲ್ಲಿ ಮಾತನಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...