alex Certify ಗಂಗಾಮಾತೆಗೆ ಪೂಜೆ ಸಲ್ಲಿಸಿದ ‘ಸಾಮ್ರಾಟ್ ಪೃಥ್ವಿರಾಜ್’ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗಾಮಾತೆಗೆ ಪೂಜೆ ಸಲ್ಲಿಸಿದ ‘ಸಾಮ್ರಾಟ್ ಪೃಥ್ವಿರಾಜ್’ ತಂಡ

ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಸಾಮ್ರಾಟ್ ಪೃಥ್ವಿರಾಜ್ ತಂಡ ವಾರಣಾಸಿಯಲ್ಲಿ ಗಂಗಾ ಪೂಜೆಯನ್ನು ನಡೆಸಿದ್ದು, ಪೂಜೆಯ ಚಿತ್ರಗಳು, ವಿಡಿಯೊ ವೈರಲ್ ಆಗಿವೆ.

ಸಾಮ್ರಾಟ್ ಪೃಥ್ವಿರಾಜ್ ತಂಡವು ಚಿತ್ರ ಬಿಡುಗಡೆಗೆ ಮುನ್ನ ಪ್ರಚಾರಕ್ಕಾಗಿ ವಿವಿಧ ನಗರಗಳಿಗೆ ಭೇಟಿ ನೀಡುತ್ತಿದೆ. ಮೇ 30 ರಂದು ಅವರು ವಾರಣಾಸಿಗೆ ಭೇಟಿ ನೀಡಿದರು.‌

ಸಾಮ್ರಾಟ್ ಪೃಥ್ವಿರಾಜ್ ಧ್ವಜದೊಂದಿಗೆ ಗಂಗಾ ಪೂಜೆಯನ್ನು ಮಾಡಿದ್ದು ವಿಶೇಷವಾಗಿತ್ತು. ನಟ ಅಕ್ಷಯ್ ಕೂಡ ಪೂಜೆಗೆ ಮುನ್ನ ಗಂಗೆಯಲ್ಲಿ ಸ್ನಾನ ಮಾಡಿದರು. ಅಕ್ಷಯ್ ಗಂಗಾನದಿಯಲ್ಲಿ ಪೂಜೆ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

HDFC ಬ್ಯಾಂಕ್‌ ಖಾತೆಗೆ ಹೆಚ್ಚುವರಿ ಹಣ ಜಮೆ; ಅಚ್ಚರಿಗೊಳಗಾದ ಗ್ರಾಹಕರು…..!

ಸಾಮ್ರಾಟ್ ಪೃಥ್ವಿರಾಜ್‌ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ತಂಡವು ಮಹಾ ನಾಯಕನಿಗೆ ಗೌರವ ಸಲ್ಲಿಸಲು ಅವರ ಆಳ್ವಿಕೆಯ ಕಾಲದಲ್ಲಿದ್ದ ಧ್ವಜವನ್ನು ವಿವಿಧ ನಗರಗಳಿಗೆ ಕೊಂಡೊಯ್ಯುತ್ತಿದೆ.

ಅಕ್ಷಯ್ ಕುಮಾರ್ ಜೊತೆಗೆ ನಟಿ ಮಾನುಷಿ ಚಿಲ್ಲರ್, ನಿರ್ದೇಶಕ ಡಾ ಚಂದ್ರಪ್ರಕಾಶ್ ದ್ವಿವೇದಿ ಗಂಗಾ ಪೂಜೆಯನ್ನು ನೆರವೇರಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...