alex Certify ಮಾಜಿ ಸೈನಿಕನ ಮೇಲೆ ಬಿಜೆಪಿ ಯುವ ಮುಖಂಡನಿಂದ ಹಲ್ಲೆ; ಶ್ರೀಕಾಂತ್ ತ್ಯಾಗಿ ನಂತರ ಮತ್ತೊಂದು ಪ್ರಕರಣ ಬೆಳಕಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸೈನಿಕನ ಮೇಲೆ ಬಿಜೆಪಿ ಯುವ ಮುಖಂಡನಿಂದ ಹಲ್ಲೆ; ಶ್ರೀಕಾಂತ್ ತ್ಯಾಗಿ ನಂತರ ಮತ್ತೊಂದು ಪ್ರಕರಣ ಬೆಳಕಿಗೆ

ಅತ್ತ ಶ್ರೀಕಾಂತ್ ತ್ಯಾಗಿ ಹಚ್ಚಿದ್ದ ಬೆಂಕಿಯೇ ಇನ್ನೂ ತಣ್ಣಗಾಗಿಲ್ಲ, ಆಗಲೇ ರೇವಾದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡನಾಗಿರೋ ರಿತುರಾಜ್, ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆಯ ಸಂಪೂರ್ಣ ದೃಶ್ಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರಿಗೆ ಬೆದರಿಸಿದ ಪ್ರಕರಣ ಮುನ್ನೆಲೆಗೆ ಬಂದಿದ್ದು, ಬಿಜೆಪಿ ಯುವಮೋರ್ಚಾದ ನಗರಾಧ್ಯಕ್ಷ ಅವರ ಅಂಗಡಿಗೆ ನುಗ್ಗಿ ಮಾಜಿ ಸೈನಿಕನಿಗೆ ಥಳಿಸಿ ಅಂಗಡಿಯ ಸಾಮಾನು ಒಡೆದು ಹಾಕಿದ್ದಾರೆ. ಹಲ್ಲೆಯ ಈ ಘಟನೆಯಲ್ಲಿ ಮಾಜಿ ಸೈನಿಕ ಮತ್ತು ಇತರೇ ಇಬ್ಬರು ಗಾಯಗೊಂಡಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವನಾಯಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಕೆಲ ಮಾಹಿತಿಯ ಪ್ರಕಾರ, ಘಟನೆ ರೇವಾದ ಅಮಾಹಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಅಂತ ಹೇಳಲಾಗುತ್ತಿದೆ. ಇಲ್ಲಿ ನಿವೃತ್ತ ಯೋಧರಾಗಿರುವ ದಿನೇಶ್‌ ಮಿಶ್ರಾ ಇವರು ಪುರುಷರ ಪಾರ್ಲರನ್ನ ನಡೆಸುತ್ತಿದ್ದಾರೆ. ಅದರಲ್ಲಿ ಇಬ್ಬರು ಉದ್ಯೋಗಿಗಳು ಸಹ ಕೆಲಸ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ಬಿಜೆಪಿ ಯುವ ಮೋರ್ಚಾದ ನಗರಾಧ್ಯಕ್ಷ ರಿತುರಾಜ್ ಚತುರ್ವೆದಿ ತಮ್ಮ ಸಂಗಡಿಗರೊಂದಿಗೆ ಅಂಗಡಿಗೆ ಬಂದು ದಿನೇಶ್ ಮಿಶ್ರಾ ಅವರನ್ನು ಥಳಿಸಿದ್ಧಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸೈನಿಕನ ದೂರಿನ ಮೇರೆಗೆ ಪೊಲೀಸರು ರಿತುರಾಜ್, ಅನುರಾಗ್ ಮಿಶ್ರಾ ಮತ್ತು ಅಮನ್ ಚತುರ್ವೇದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಯ ಸಂಪೂರ್ಣ ದೃಶ್ಯ ಅಂಗಡಿಯಲ್ಲಿರುವ ಸಿಸಿ ಟಿವಿಯಲ್ಲಿ ಸಿಕ್ಕಿದ್ದು, ಅದನ್ನೇ ಈಗ ಸಾಕ್ಷಿಯನ್ನಾಗಿ ಇಟ್ಟುಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...