alex Certify ಬಿಗ್‌ ಬಿ​, ಸಚಿನ್​ ತೆಂಡೂಲ್ಕರ್​ ಬಳಿಕ ರಜನಿಕಾಂತ್ ​ಗೂ ಬಂತು ಈ​ ಆಹ್ವಾನ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ಬಿ​, ಸಚಿನ್​ ತೆಂಡೂಲ್ಕರ್​ ಬಳಿಕ ರಜನಿಕಾಂತ್ ​ಗೂ ಬಂತು ಈ​ ಆಹ್ವಾನ !

ಅಮಿತಾಬ್​ ಬಚ್ಛನ್​ ಹಾಗೂ ಸಚಿನ್​ ತೆಂಡೂಲ್ಕರ್​ ಬಳಿಕ 2023ನೇ ಸಾಲಿನ ಐಸಿಸಿ ಕ್ರಿಕೆಟ್​ ವಿಶ್ವಕಪ್​​ ಪಂದ್ಯಾವಳಿಗಾಗಿ ತಲೈವಾ ರಜಿನಿಕಾಂತ್​​ರಿಗೆ ಗೋಲ್ಡನ್​ ಟಿಕೆಟ್​ ನೀಡಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಆಹ್ವಾನ ನೀಡಿದ್ದಾರೆ.

ವರ್ಚಸ್ಸಿನ ನಿಜವಾದ ಮೂರ್ತರೂಪ ಹಾಗೂ ಸಿನಿಮೀಯ ತೇಜಸ್ಸು ಆಗಿರುವ ನಟನಿಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಟಿಕೆಟ್​ ನೀಡಿದರು ಎಂದು ಎಕ್ಸ್​​ನಲ್ಲಿ ಈ ಫೋಟೋವನ್ನು ಶೇರ್​ ಮಾಡಲಾಗಿದೆ. ಜಯ್​ ಶಾ, ರಜನಿಕಾಂತ್​​ರಿಗೆ ಟಿಕೆಟ್​ ನೀಡುತ್ತಿರೋದನ್ನು ಈ ಫೋಟೋದಲ್ಲಿ ಕಾಣಬಹುದಾಗಿದೆ.

ಅಮಿತಾಬ್​ ಬಚ್ಛನ್​ ಹಾಗೂ ಸಚಿನ್​ ತೆಂಡೂಲ್ಕರ್​ರಿಗೂ ಬಿಸಿಸಿಐ ಇದೇ ರೀತಿ ಗೌರವಪೂರ್ವಕವಾಗಿ ಗೋಲ್ಡನ್​ ಟಿಕೆಟ್​ ನೀಡಿ ಪಂದ್ಯಕ್ಕೆ ಆಹ್ವಾನಿಸಿದೆ. 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತವು ಅಕ್ಟೋಬರ್ 5 ರಿಂದ ನವೆಂಬರ್ 19, 2023 ರವರೆಗೆ ಆಯೋಜಿಸಲಿದೆ.

ಪಂದ್ಯಾವಳಿಯು ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹತ್ತು ತಂಡಗಳನ್ನು ಒಳಗೊಂಡಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...