alex Certify ಕರುಳು ಹಿಂಡುವಂತಿದೆ ಪುನೀತ್​ ರಾಜ್​ಕುಮಾರ್​ ಅಗಲಿಕೆ ಕೇಳಿ ಈ ಕಂದಮ್ಮ ಕಣ್ಣೀರಿಟ್ಟ ಪರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುಳು ಹಿಂಡುವಂತಿದೆ ಪುನೀತ್​ ರಾಜ್​ಕುಮಾರ್​ ಅಗಲಿಕೆ ಕೇಳಿ ಈ ಕಂದಮ್ಮ ಕಣ್ಣೀರಿಟ್ಟ ಪರಿ..!

ಸರಳ ಸಜ್ಜನಿಕೆಯ ನಟ ಪುನೀತ್​ ರಾಜ್​ಕುಮಾರ್​ ನಿಧನದಿಂದ ಸಂಪೂರ್ಣ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡ್ತಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿಯೇ ಪುನೀತ್​ ರಾಜ್​ಕುಮಾರ್​ ಅಂತ್ಯಕ್ರಿಯೆ ನೆರವೇರಲಿದ್ದು ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಪುನೀತ್​​ ರಾಜ್​ಕುಮಾರ್​ರ ಸಂಬಂಧಿಯಲ್ಲ, ಆತ್ಮೀಯರಲ್ಲ, ಭೇಟಿಯಾದದ್ದೂ ಇಲ್ಲ. ಆದರೂ ಸಹ ಕರುನಾಡಿನ ಅದೆಷ್ಟೋ ಮನೆಗಳು ಇಂದು ಅಪ್ಪುವಿಗಾಗಿ ಟಿವಿ ಮುಂದೆ ಕುಳಿತು ಕಣ್ಣೀರು ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ವೃದ್ಧರು ಪುನೀತ್​ ಬದಲು ಆ ದೇವರು ನಮ್ಮನಾದರೂ ಕರೆದುಕೊಂಡು ಹೋಗಬಾರದಿತ್ತೇ ಎಂದು ಹೇಳ್ತಿದ್ರೆ ಅದೆಷ್ಟೋ ತಾಯಂದಿರು ಹಿರಿ ಮಗನನ್ನೇ ಕಳೆದುಕೊಂಡಂತೆ ಅಳುತ್ತಿದ್ದಾರೆ.

ಇದೇ ರೀತಿ ಪುಟ್ಟ ಮಗುವೊಂದು ಪುನೀತ್​ ರಾಜ್​ಕುಮಾರ್​ಗಾಗಿ ರೋಧಿಸುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಪುನೀತ್​ ಸತ್ತಿಲ್ಲ, ಇನ್ನೂ ಇದಾರೆ ಎಂದು ಮನೆಯವರು ಸಮಾಧಾನ ಮಾಡುತ್ತಿದ್ದರೂ ಸಹ ಪುಟ್ಟ ಮಗುವೊಂದು ನನಗೆ ಪುನೀತ್​ ಅಣ್ಣ ಬೇಕೆಂದು ರೋಧಿಸುತ್ತಿರುವ ದೃಶ್ಯ ಕರಳುಹಿಂಡುವಂತಿದೆ.

ನಟ ಪುನೀತ್​ ರಾಜ್​ಕುಮಾರ್​ ಅಂತ್ಯಕ್ರಿಯೆ ನಾಳೆ ಮುಂಜಾನೆಯೇ ನಡೆಸುವ ಬಗ್ಗೆ ಕುಟುಂಬಸ್ಥರು ತೀರ್ಮಾನ ಕೈಗೊಂಡಿದ್ದಾರೆ. ರಾತ್ರಿಯ ವೇಳೆ ಅಭಿಮಾನಿಗಳ ಅಂತಿಮ ದರ್ಶನ ಪೂರ್ಣಗೊಂಡಲ್ಲಿ ಮುಂಜಾನೆಯೇ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿವೆ.

ಒಂದು ವೇಳೆ ಅಭಿಮಾನಿಗಳ ಅಂತಿಮ ದರ್ಶನಕ್ಕೆ ವಿಳಂಬವಾದಲ್ಲಿ ನಾಳೆ ಬೆಳಗ್ಗೆಯೂ ಸ್ವಲ್ಪ ಸಮಯ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಬಳಿಕ ಅಂತಿಮ ಕಾರ್ಯ ಕೈಗೊಳ್ಳುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ದಿವಂಗತ ರಾಜ್​ಕುಮಾರ್​ ಹಾಗೂ ಪಾರ್ವತಮ್ಮ ರಾಜ್​ಕುಮಾರ್​​ರ ಸಮಾಧಿ ಪಕ್ಕದಲ್ಲಿಯೇ ಪುನೀತ್​ ರಾಜ್​ಕುಮಾರ್​ರನ್ನು ಸಮಾಧಿ ಮಾಡಲು ಸಕಲ ತಯಾರಿ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...