alex Certify ಉತ್ತರ ಕನ್ನಡಕ್ಕೆ ಆಗಮಿಸಿದ್ದ ಪುನೀತ್​ ಬುಡಕಟ್ಟು ಜನಾಂಗದವರ ಜೊತೆ ಕಳೆದ ಕ್ಷಣ ಹೇಗಿತ್ತು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಕನ್ನಡಕ್ಕೆ ಆಗಮಿಸಿದ್ದ ಪುನೀತ್​ ಬುಡಕಟ್ಟು ಜನಾಂಗದವರ ಜೊತೆ ಕಳೆದ ಕ್ಷಣ ಹೇಗಿತ್ತು ಗೊತ್ತಾ…..?

ನಟ ಪುನೀತ್​ ರಾಜ್​ಕುಮಾರ್​​ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಬಾರಿ ಆಗಮಿಸಿದ್ದರು. ಪ್ರಸಿದ್ಧ ನಟನಾಗಿದ್ದರೂ ಸಹ ಸರಳತೆಯ ಸಾಕಾರ ಮೂರ್ತಿಯಾಗಿದ್ದ ನಟಸಾರ್ವಭೌಮ ಪುನೀತ್​​ ಜೋಯಿಡಾದ ಬುಡಕಟ್ಟು ಜನಾಂಗವಾದ ಕುಣುಬಿ ಹಾಗೂ ಗೌಳಿಗರ ಜೊತೆ ಕೂತು ಕುಶಲೋಪರಿ ವಿಚಾರಿಸಿದ್ದರು.

 

ಸಿನಿಮಾ ಚಿತ್ರೀಕರಣಕ್ಕೆಂದು ಜೋಯಿಡಾಗೆ ಆಗಮಿಸಿದ್ದ ಪವರ್​ ಸ್ಟಾರ್​ ಪುನೀತ್​​ ಕಾಡುಮನೆ ಜೇನುತುಪ್ಪ ಸವಿದಿದ್ದರು. ಗೌಳಿ ಹಾಗೂ ಕುಣುಬಿಯರ ಮನೆಯಲ್ಲೇ ಕೂತು ಊಟದ ಆತಿಥ್ಯವನ್ನೂ ಸ್ವೀಕರಿಸಿದ್ದರು. ಹತ್ತು ದಿನಗಳ ಕಾಲ ಜೋಯಿಡಾದಲ್ಲೇ ಇದ್ದ ಪುನೀತ್​​ ಹಾರ್ನ್​ಬಿಲ್​ ಪಕ್ಷಿಯನ್ನು ಮೊದಲಬಾರಿಗೆ ಕಣ್ತುಂಬಿಕೊಂಡು ಸಂಭ್ರಮಿಸಿದ್ದರು.

ಚಂದನವನ ಕಂಡ ಅಪ್ರತಿಮ ನಟ ಪುನೀತ್​ ರಾಜ್​ಕುಮಾರ್​ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ದೈಹಿಕ ಕಸರತ್ತು ನಡೆಸುತ್ತಿದ್ದ ವೇಳೆ ಹೃದಾಯಾಘಾತ ಉಂಟಾಗಿದ್ದು ಕೂಡಲೇ ಪುನೀತ್​​ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಪಾರ್ಥೀವ ಶರೀರವನ್ನು ಸದಾಶಿವನಗರದ ನಿವಾಸದಲ್ಲಿ ಇರಿಸಲಾಗಿದ್ದು ಗಣ್ಯ ವ್ಯಕ್ತಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕರಿಗೆ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...