alex Certify ತಡರಾತ್ರಿ ಯುವಕ, ಯುವತಿಯರಿದ್ದ ಕಾರ್ ಡಿಕ್ಕಿ: ಪೊಲೀಸ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಯುವಕ, ಯುವತಿಯರಿದ್ದ ಕಾರ್ ಡಿಕ್ಕಿ: ಪೊಲೀಸ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವು

ಬೆಂಗಳೂರು: ಅಸೆಂಟ್ ಕಾರ್ ಡಿಕ್ಕಿಯಾಗಿ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದಾರೆ. ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸುರೇಶ್ ಮೃತಪಟ್ಟವರು.

ಕೆಟ್ಟು ನಿಂತಿದ್ದ ಇನೋವಾ ಪರಿಶೀಲನೆ ವೇಳೆ ಅತಿವೇಗವಾಗಿ ಬಂದ ಮತ್ತೊಂದು ಕಾರ್ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ ಇನ್ಸ್ ಪೆಕ್ಟರ್ ಮತ್ತು ಕಾನ್ಸ್ಟೇಬಲ್ ರೌಂಡ್ಸ್ ಹೋಗಿದ್ದರು. ಸುರೇಶ್ ಸಾವನ್ನಪ್ಪಿದ್ದು, ಇನ್ಸ್ ಪೆಕ್ಟರ್ ಧರ್ಮೇಗೌಡ ಪಾರಾಗಿದ್ದಾರೆ.

ಚಿಕ್ಕಜಾಲ ಸಮೀಪ ಹೆದ್ದಾರಿಯಲ್ಲಿ ಇನೋವಾ ಕಾರ್ ಕೆಟ್ಟು ನಿಂತಿತ್ತು. ಚಾಲಕನ ಸಹಾಯಕ್ಕೆ ಇನ್ಸ್ ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹೋಗಿದ್ದ ವೇಳೆ ಇನೋವಾ ಕಾರ್ ಗೆ ಆಸೆಂಟ್ ಕಾರ್ ಡಿಕ್ಕಿ ಹೊಡೆದಿದೆ. ಅಸೆಂಟ್ ಕಾರ್ ಚಾಲಕ ಕಂಠಪೂರ್ತಿ ಕುಡಿದಿದ್ದ. ಕಾರ್ ನಲ್ಲಿ ಮೂವರು ಯುವಕರು, ಯುವತಿಯರಿದ್ದರು. ಕುಡಿದ ಮತ್ತಿನಲ್ಲಿ ನಂದಿಬೆಟ್ಟದ ಕಡೆ ಆರು ಜನ ಹೊರಟಿದ್ದರು.

ಅಪಘಾತದ ರಭಸಕ್ಕೆ ಕಾನ್ಸ್ಟೇಬಲ್ ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರ್  ಚಾಲಕನ ಕೈ, ಕಾಲು ಮುರಿದಿವೆ. ಫೋನ್ ಕಾಲ್ ನಲ್ಲಿ ಮಾತನಾಡಲು ಸೈಡ್ ಗೆ ಹೋಗಿದ್ದ ಇನ್ಸ್ಪೆಕ್ಟರ್ ಪಾರಾಗಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕ, ಯುವತಿಯರಿಗೂ ಗಂಭೀರ ಗಾಯಗಳಾಗಿವೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...