alex Certify ಮುಂಜಾನೆ ಭಾರಿ ಮಳೆ ನಡುವೆ ನದಿಗೆ ಬಿದ್ದ ಕಾರ್, 9 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಜಾನೆ ಭಾರಿ ಮಳೆ ನಡುವೆ ನದಿಗೆ ಬಿದ್ದ ಕಾರ್, 9 ಮಂದಿ ಸಾವು

ಉತ್ತರಾಖಂಡ್ ನಲ್ಲಿ ಕಾರ್ ನದಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಮನಗರ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಪಂಜಾಬ್ ನಿಂದ ಉತ್ತರಾಖಂಡ್ ಪ್ರವಾಸಕ್ಕೆ 10 ಜನ ಬಂದಿದ್ದು, 10 ಜನರ ಪೈಕಿ ಒಂದು ಮಗು ಮಾತ್ರ ಬದುಕುಳಿದಿದೆ. ಕಾರ್ ನಲ್ಲಿದ್ದ ಹೆಣ್ಣು ಮಗುವನ್ನು ಎಸ್.ಡಿ.ಆರ್.ಎಫ್. ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಇಂದು ಮುಂಜಾನೆ ಮಳೆಯಿಂದಾಗಿ ಭಾರೀ ಪ್ರಮಾಣದ ನೀರಿನ ಹರಿವಿನ ನಡುವೆ ರಾಮನಗರದ ಧೇಲಾ ನದಿಯಲ್ಲಿ ಕಾರ್ ಕೊಚ್ಚಿಹೋಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ, 1 ಮಗು ರಕ್ಷಿಸಲಾಗಿದೆ. ಸುಮಾರು 5 ಮಂದಿ ಸಿಕ್ಕಿಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕುಮಾನ್ ರೇಂಜ್ ಡಿಐಜಿ ಆನಂದ್ ಭರನ್ ಖಚಿತಪಡಿಸಿದ್ದಾರೆ.

ಉತ್ತರಾಖಂಡ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ತಂಡವು ಸ್ಥಳಕ್ಕೆ ಧಾವಿಸಿದೆ. ರಾಮನಗರ ಕೋಟ್‌ ದ್ವಾರ ರಸ್ತೆಯಲ್ಲಿರುವ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಧೇಲಾ ವಲಯದಲ್ಲಿ ಅಪಘಾತ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...