alex Certify ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನ ಕೊಂದು ಗುರುತು ಸಿಗದಂತೆ ಸುಟ್ಟುಹಾಕಿದ ಅಪ್ರಾಪ್ತರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನ ಕೊಂದು ಗುರುತು ಸಿಗದಂತೆ ಸುಟ್ಟುಹಾಕಿದ ಅಪ್ರಾಪ್ತರು….!

ಮೂವರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯದ ಸೇಡು ತೀರಿಸಿಕೊಳ್ಳಲು ಯುವಕನನ್ನು ಇರಿದು ಕೊಂದ ಘಟನೆ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದಿದೆ. ಮೂವರು, 25 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಶಂಕಿತ ಆರೋಪಿಗಳು ನಿಜಾಮುದ್ದೀನ್ ಬಸ್ತಿ ನಿವಾಸಿಗಳು. ಅವರು ಯುವಕನ ಮುಖವನ್ನು ಕಲ್ಲಿನಿಂದ ವಿರೂಪಗೊಳಿಸಿ ಸಾಕ್ಷ್ಯವನ್ನು ನಾಶಮಾಡಲು ಯುವಕನ ದೇಹಕ್ಕೆ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

16 ವರ್ಷದ ಇಬ್ಬರು ಮತ್ತು 17 ವರ್ಷದ ಓರ್ವ ಅಪ್ರಾಪ್ತನನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ ನಂತರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪೊಲೀಸರ ಪ್ರಕಾರ ಶನಿವಾರ ಮೂವರು ಶಂಕಿತರ ಬಂಧನದ ಬಗ್ಗೆ ಮಾಹಿತಿ ಬಂದಿದೆ. ಮೂವರು ಆಜಾದ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಕೊಲೆ ಮಾಡಿದ್ದು ಅವನ ದೇಹವು ಖುಸ್ರೋ ಪಾರ್ಕ್‌ನಲ್ಲಿ ಬಿದ್ದಿದೆ ಎಂದಿದ್ದರು. ಪೊಲೀಸ್ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದಾಗ ಅರ್ಧ ಸುಟ್ಟ ದೇಹವು ಪತ್ತೆಯಾಗಿತ್ತು. ಪೊಲೀಸ್ ಮತ್ತು ಫೋರೆನ್ಸಿಕ್ಸ್ ತಂಡವು ಅಪರಾಧದ ಸ್ಥಳವನ್ನು ಪರಿಶೀಲಿಸಿ ದೇಹವನ್ನು ಸಂರಕ್ಷಣೆಗಾಗಿ ಏಮ್ಸ್ ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಆಗ್ನೇಯ) ರಾಜೇಶ್ ಡಿಯೋ ಹೇಳಿದರು.

ವಿಚಾರಣೆಯ ಸಮಯದಲ್ಲಿ ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ದುಷ್ಟನೆಂದು ಘೋಷಿಸಲಾದ ಆಜಾದ್ ಹಲವಾರು ಸಂದರ್ಭಗಳಲ್ಲಿ ತಮ್ಮಲ್ಲಿ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅಪ್ರಾಪ್ತರು ಹೇಳಿದ್ದಾರೆ.

ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಮೂವರು ಗುಂಪುಗೂಡಿ ಆತನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸತ್ತವನ ಗುರುತು ಸೇರಿದಂತೆ ಸಾಕ್ಷ್ಯ ನಾಶಮಾಡಲು ಒಣ ಹುಲ್ಲು ಮತ್ತು ಬಟ್ಟೆಗಳ ಸಹಾಯದಿಂದ ದೇಹವನ್ನು ಸುಡಲು ಪ್ರಯತ್ನಿಸಿದ್ದರು.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...