alex Certify ಪಂಚಾಯಿತಿ ಕಛೇರಿಯಲ್ಲಿ ಇಸ್ಪೀಟಾಟ; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಚಾಯಿತಿ ಕಛೇರಿಯಲ್ಲಿ ಇಸ್ಪೀಟಾಟ; ಫೋಟೋ ವೈರಲ್

ಮಧ್ಯ ಪ್ರದೇಶ ಬಾಲಾಘಾಟ್‌ನ ಜನಪದ ಪಂಚಾಯಿತಿ ಕಚೇರಿಯಲ್ಲಿ ಇಸ್ಪೀಟಾಟದಲ್ಲಿ ನಿರತರಾಗಿದ್ದ ಅಧಿಕಾರಿಗಳ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂವರನ್ನು ಕೂಡಲೇ ಅಮಾನತಿನಲ್ಲಿಡಲು ಕಲೆಕ್ಟರ್‌ ಗಿರೀಶ್ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಪಂಚಾಯಿತಿ ಸಮನ್ವಯ ಅಧಿಕಾರಿ ರಾಜ್ಕುಮಾರ್‌ ಧೋಕ್, ಸಹಾಯಕ ಗ್ರೇಡ್‌-3 ಮನೋಜ್ ಚೌರೆ ಹಾಗೂ ಮಹೇಶ್ ಕುಂಬಾರೆ ಹೆಸರಿನ ಮೂವರು ಹೀಗೆ ಚಿತ್ರದಲ್ಲಿ ಇಸ್ಪೀಟಿನಾಟದಲ್ಲಿ ಭಾಗಿಯಾಗಿದ್ದವರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವರಶಿವಾನಿ ಸಲಹೆ ಮೇರೆಗೆ ಕಲೆಕ್ಟರ್‌ ಗಿರೀಶ್ ಕುಮಾರ್‌ ಮಿಶ್ರಾ ಈ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ವರಶಿವಾನಿಯ ಜಿಲ್ಲಾ ಕಚೇರಿಯನ್ನು ಇಂಥ ದುಷ್ಕರ್ಮಿಗಳು ಜೂಜಿನ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ಪ್ರಕಟಗೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...