alex Certify ಮಣ್ಣಾಗಿದ್ದ ಮಗಳ ಬಟ್ಟೆ ಕಂಡು ವಿಚಾರಿಸಿದ ಮನೆಯವರಿಗೆ ಬಿಗ್ ಶಾಕ್: ಕಬ್ಬು ಕೊಡುವುದಾಗಿ ಪೊದೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣ್ಣಾಗಿದ್ದ ಮಗಳ ಬಟ್ಟೆ ಕಂಡು ವಿಚಾರಿಸಿದ ಮನೆಯವರಿಗೆ ಬಿಗ್ ಶಾಕ್: ಕಬ್ಬು ಕೊಡುವುದಾಗಿ ಪೊದೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ 20 ವರ್ಷದ ಎಂಡೋಸಲ್ಫಾನ್ ಸಂತ್ರಸ್ತೆ ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಪುತ್ತೂರಿನ ಕಬಕ ಹಳ್ಳಿಯ ಮುರಾದ ನಿವಾಸಿಯಾದ ಸಂತ್ರಸ್ತೆ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ವಾಕ್ ಮಾಡಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಸಂತ್ರಸ್ತೆಯು ಮನೆಗೆ ಮರಳಿದಾಗ, ಬಟ್ಟೆಗಳು ಮಣ್ಣಾಗಿರುವುದನ್ನು ಕಂಡ ಆಕೆಯ ತಂದೆ ಪ್ರಶ್ನಿಸಿದ್ದಾರೆ. ತನಗೆ ಪರಿಚಿತನಾದ ವ್ಯಕ್ತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆ ತಂದೆಗೆ ತಿಳಿಸಿದ್ದಾಳೆ.

ಸಂತ್ರಸ್ಥೆ ಮುರಾ ರೈಲ್ವೆ ಕ್ರಾಸ್ ತಲುಪಿದಾಗ, ಆರೋಪಿ ಹನೀಫ್ ಕಬ್ಬು ಖರೀದಿಸಿ ಆಕೆಗೆ ಕೊಡುವುದಾಗಿ ಆಮಿಷವೊಡ್ಡಿ ಪೊದೆಯೊಂದಕ್ಕೆ ಕರೆದೊಯ್ದಿದ್ದಾನೆ. ಸಂತ್ರಸ್ತೆಯು ಲೈಂಗಿಕ ಕ್ರಿಯೆಗೆ ನಿರಾಕರಿಸಿದಾಗ, ಆರೋಪಿ ಥಳಿಸಿ ಅತ್ಯಾಚಾರ ಎಸಗಿದ್ದಾನೆ. ಆತನ ಹಿಡಿತದಿಂದ ತಪ್ಪಿಸಿಕೊಂಡಾಗ ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಪುತ್ತೂರು ಪಟ್ಟಣ ಪೊಲೀಸರು ಸೆಕ್ಷನ್ 504, 323, 377, 506  ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆನ್ನಲಾಗಿದೆ. .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...