alex Certify ಹೃದಯಾಘಾತಕ್ಕೆ ಒಳಗಾದ ರೋಗಿಗಳು ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತಕ್ಕೆ ಒಳಗಾದ ರೋಗಿಗಳು ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ..…!

 

ಹೃದಯಾಘಾತ ಗಂಭೀರ ಆರೋಗ್ಯ ಸಮಸ್ಯೆಗಳಲ್ಲೊಂದು. ಹೃದಯದ ಸಮಸ್ಯೆ ಇರುವವರು ಮತ್ತು ಒಮ್ಮೆ ಹೃದಯಾಘಾತಕ್ಕೆ ತುತ್ತಾದವರು ತಮ್ಮ ಆಹಾರ ಪದ್ಧತಿಯಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಆಹಾರದಲ್ಲಿನ ಏರುಪೇರು ಹೃದಯ ರೋಗಿಗಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಹೃದಯಾಘಾತಕ್ಕೆ ಒಳಗಾದ ರೋಗಿಗಳು ತ್ಯಜಿಸಲೇಬೇಕಾದ ಕೆಲವು ಆಹಾರ ಪದಾರ್ಥಗಳಿವೆ. ಅವುಗಳನ್ನು ಸೇವಿಸಿದರೆ ರೋಗಿಗಳ ಸ್ಥಿತಿ ಇನ್ನಷ್ಟು ಹದಗೆಡಬಹುದು. ಹೃದಯಾಘಾತಕ್ಕೆ ಓಳಗಾದವರು ತಮ್ಮ ಆಹಾರದಲ್ಲಿ ಉಪ್ಪು, ಸಕ್ಕರೆ, ಕೊಬ್ಬು ಮತ್ತು ಕೆಫೀನ್‌ಗಳ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇವೆಲ್ಲವೂ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಪರಿಣಾಮ ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ. ಆದ್ದರಿಂದ ಹೃದಯಾಘಾತದ ನಂತರ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ. ಹೃದ್ರೋಗಿಗಳು ಏನನ್ನು ತಿನ್ನಬಾರದು ಎಂದು ತಿಳಿಯೋಣ.

ಹೃದಯಾಘಾತಕ್ಕೆ ತುತ್ತಾದ ರೋಗಿಗಳು ತಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಧಿಕ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಉಪ್ಪು ರಕ್ತದಲ್ಲಿನ ಸೋಡಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೃದಯವು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ.

ಹೃದಯದ ಸಮಸ್ಯೆ ಇರುವವರು ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಸಕ್ಕರೆಯಲ್ಲಿರುವ ಗ್ಲೂಕೋಸ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ಹೃದಯದ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.

ಹೃದಯಾಘಾತಕ್ಕೆ ಒಳಗಾದವರು ಐಸ್ ಕ್ರೀಮ್ ಅನ್ನು ತಿನ್ನಬಾರದು. ಐಸ್ ಕ್ರೀಂನಲ್ಲಿ ಹೇರಳವಾದ ಸಕ್ಕರೆ ಮತ್ತು ಕೊಬ್ಬಿನಂಶವಿದೆ, ಇದು ಹೃದಯ ರೋಗಿಗಳಿಗೆ ಹಾನಿಕಾರಕ.

ಕರಿದ ಆಹಾರಗಳಾದ ಪರೋಟ, ಪೂರಿ, ಸಮೋಸ, ಪಕೋಡ ಇತ್ಯಾದಿಗಳನ್ನು ತಿನ್ನಬಾರದು. ಏಕೆಂದರೆ ಕರಿದ ಆಹಾರದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಟ್ರಾನ್ಸ್ ಫ್ಯಾಟ್ ಅಧಿಕವಾಗಿರುತ್ತದೆ. ಅಧಿಕ ಕೊಬ್ಬು ಅಪಧಮನಿಗಳಲ್ಲಿ ದಟ್ಟಣೆಯನ್ನು ಉಂಟುಮಾಡಬಹುದು. ಇದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...