alex Certify ಹಿರಿಯ ನಟ ʼದೇವಾನಂದ್‌ʼ ಕುರಿತು ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟ ʼದೇವಾನಂದ್‌ʼ ಕುರಿತು ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ

ಬಾಲಿವುಡ್ ನಾಯಕ ನಟರಾಗಿದ್ದ ದೇವಾನಂದ್‌ ಡಿಸೆಂಬರ್‌ 3 ರಂದು ವಿಧಿವಶರಾಗಿದ್ದರು. ಈ ಹಿರಿಯ ನಟನ ಕುರಿತು ಬಹುಶಃ ಎಲ್ಲರಿಗೂ ಹೆಚ್ಚು ಗೊತ್ತಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ಬಾಲಿವುಡ್ ಪ್ರವೇಶಿಸುವ ಮೊದಲು ದೇವಾನಂದ್ ಮುಂಬೈನಲ್ಲಿ ಕಷ್ಟಕರ ದಿನಗಳನ್ನು ಕಳೆದಿದ್ದರು. ಆರಂಭದಲ್ಲಿ ಸಂಸ್ಥೆಯೊಂದರಲ್ಲಿ ಕೇವಲ 85 ರೂ. ಸಂಬಳಕ್ಕೆ ಗುಮಾಸ್ತರಾಗಿದ್ದರು. ನಂತರ ಮಿಲಿಟರಿ ಸೆನ್ಸಾರ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ ಅವರು 160 ರೂ. ಸಂಬಳ ಪಡೆಯುತ್ತಿದ್ದರು.

ಹಿರಿಯ ನಟ ಅಶೋಕ್ ಕುಮಾರ್ ಅವರು ದೇವಾನಂದ್ ಅವರಿಗೆ ನಟನಾಗಲು ಸ್ಫೂರ್ತಿಯಾಗಿದ್ದರು. ಅವರ ಅಚ್ಚುತ್ ಕನ್ಯಾ ಮತ್ತು ಕಿಸ್ಮತ್ ಚಿತ್ರ ನೋಡಿದ ದೇವಾನಂದ್ ಅವರಿಗೆ ನಟನಾಗಬೇಕೆಂಬ ಆಸೆ ಚಿಗುರೊಡೆಯಿತು.

ಕುತೂಹಲ ಸಂಗತಿಯೆಂದರೆ ಅಶೋಕ್ ಕುಮಾರ್ ಅವರೇ ದೇವಾನಂದ್ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದರು. 1948ರಲ್ಲಿ ಜಿದ್ದಿ ಚಿತ್ರಕ್ಕೆ ಕಾಮಿನಿ ಕೌಶಲ್ ಜತೆ ನಾಯಕನಾಗಿ ನಟಿಸಲು ದೇವಾನಂದ್ ಅವರನ್ನು ಅಶೋಕ್ ಕುಮಾರ್ ಆಯ್ಕೆ ಮಾಡಿದ್ದರು.

ಸುರೈಯ್ಯಾ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ದೇವಾನಂದ್ ಅವರಿಗೆ, ವಿದ್ಯಾ ಚಿತ್ರಕ್ಕಾಗಿ ʼಕಿನಾರೆ ಕಿನಾರೆʼ ಹಾಡಿನ ಶೂಟಿಂಗ್ ವೇಳೆ ಅವರೊಂದಿಗೆ ಪ್ರೀತಿ ಅಂಕುರಿಸಿತ್ತು. ನಂತರ ಜೀತ್ ಚಿತ್ರದ ಸೆಟ್‌ನಲ್ಲಿ 3000 ರೂ. ಮೌಲ್ಯದ ವಜ್ರದುಂಗುರ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದ್ದರು.

ಸುರೈಯ್ಯಾ ಅವರ ಕುಟುಂಬದೊಂದಿಗೆ ವೈಯಕ್ತಿಕ ಸಮಸ್ಯೆ ಕಾಣಿಸಿಕೊಂಡ ನಂತರ, ದೇವಾನಂದ್ ಇನ್ನೊಬ್ಬ ನಟಿ ಕಲ್ಪನಾ ಕಾರ್ತಿಕ್ ಅವರನ್ನು ಪ್ರೀತಿಸುತ್ತಿದ್ದರು. ಅವರಿಬ್ಬರೂ 1954ರಲ್ಲಿ ಮದುವೆಯಾಗಿ, ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು.

2011ರ ಡಿ.3ರಂದು ತಮ್ಮ 88ನೇ ವಯಸ್ಸಿನಲ್ಲಿ ದೇವಾನಂದ್ ಲಂಡನ್‌ನ ವಾಷಿಂಗ್ಟನ್ ಮೇಫೇರ್ ಹೋಟೆಲ್‌ನ ತಮ್ಮ ಕೊಠಡಿಯಲ್ಲಿ ಹೃದಯಾಘಾತದಿಂದ ನಿಧನರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...