alex Certify ಹಿಜಾಬ್​ ವಿಚಾರವಾಗಿ ರಾಜ್ಯವನ್ನು ಟೀಕಿಸಿದ ಮಲಾಲಾಗೆ ಟಾಂಗ್​ ಕೊಟ್ಟ ಸಿ.ಟಿ. ರವಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್​ ವಿಚಾರವಾಗಿ ರಾಜ್ಯವನ್ನು ಟೀಕಿಸಿದ ಮಲಾಲಾಗೆ ಟಾಂಗ್​ ಕೊಟ್ಟ ಸಿ.ಟಿ. ರವಿ…..!

ರಾಜ್ಯದಲ್ಲಿ ಹಿಜಾಬ್ ವಿವಾದ ತೀವ್ರಗೊಳ್ಳುತ್ತಿರುವ ಬೆನಲ್ಲೇ ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್​ಜಾಯ್​ ಕರ್ನಾಟಕದ ಈ ಪರಿಸ್ಥಿತಿಯನ್ನು ’ಭಯಾನಕ’ ಎಂದು ಬಣ್ಣಿಸಿದ್ದಾರೆ. ಟ್ವಿಟರ್​ನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರ ವಿವಾದದ ಕುರಿತು ಆಕ್ರೋಶ ಹೊರಹಾಕಿದ ಮಲಾಲಾ ಹಿಜಬ್​ ಧರಿಸುವ ಯುವತಿಯರಿಗೆ ತರಗತಿಗಳಿಗೆ ಹಾಜರಾಗಲು ವಿರೋಧ ಸೂಚಿಸುತ್ತಿರುವದನ್ನು ಖಂಡಿಸಿದ್ದಾರೆ.


ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಹಾಗೂ ಹಿಜಬ್​ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಿದೆ. ಶಾಲೆಗಳಲ್ಲಿ ಹಿಜಬ್​ ಧರಿಸಿ ಓಡಾಡಲು ಅಡ್ಡಿ ಮಾಡುತ್ತಿರುವುದು ನಿಜಕ್ಕೂ ಭಯಾನಕ ಎನಿಸಿದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕಿದೆ ಎಂದು ಮಲಾಲಾ ಟ್ವೀಟಾಯಿಸಿದ್ದಾರೆ.

ಮಲಾಲಾ ಯುಸೂಫ್​ಜಾಯ್​ರ ಟ್ವೀಟ್​ ವೈರಲ್​ ಆಗುತ್ತಿದ್ದಂತೆಯೇ ಇದಕ್ಕೆ ಟ್ವಿಟರ್ ಮೂಲಕವೇ ಟಾಂಗ್​ ನೀಡಿದ ಬಿಜೆಪಿ ಶಾಸಕ ಹಾಗೂ ಪಕ್ಷದ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಸಿ.ಟಿ ರವಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಈ ಮುಲ್ಲಾ ಯಾರು..? ಈಕೆಯೂ ಬುರ್ಕಾದ ಹಿಂದೆ ಅಡಗಿ ಇರಬೇಕಿತ್ತಲ್ಲವೇ..? ಎಂದು ವ್ಯಂಗ್ಯವಾಡಿದ್ದಾರೆ .

— C T Ravi ?? ಸಿ ಟಿ ರವಿ (@CTRavi_BJP) February 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...