alex Certify ಹಿಂಸಾತ್ಮಕ ಕೃತ್ಯ ನಡೆಸಲು ತಂಡ ರಚಿಸಿದ ಭೂಗತ ಪಾತಕಿ: ದೆಹಲಿ, ಮುಂಬೈ ದಾವೂದ್​ ಇಬ್ರಾಹಿಂ ಟಾರ್ಗೆಟ್​….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂಸಾತ್ಮಕ ಕೃತ್ಯ ನಡೆಸಲು ತಂಡ ರಚಿಸಿದ ಭೂಗತ ಪಾತಕಿ: ದೆಹಲಿ, ಮುಂಬೈ ದಾವೂದ್​ ಇಬ್ರಾಹಿಂ ಟಾರ್ಗೆಟ್​….?

ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಭಾರತವನ್ನು ಗುರಿಯಾಗಿಸಲು ವಿಶೇಷ ಘಟಕವೊಂದನ್ನು ರಚಿಸಿದ್ದಾನೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಎನ್​ಐಎ ನೀಡಿರುವ ಮಾಹಿತಿಯ ಪ್ರಕಾರ ದಾವೂದ್​ ಇಬ್ರಾಹಿಂ ಹಿಟ್​ ಲಿಸ್ಟ್​ನಲ್ಲಿ ಸಾಕಷ್ಟು ರಾಜಕೀಯ ನಾಯಕರು, ಉನ್ನತ ಉದ್ಯಮಿಗಳು ಇದ್ದಾರೆ ಎನ್ನಲಾಗಿದೆ.

ದಾವೂದ್​ ಇಬ್ರಾಹಿಂ ತನ್ನ ಈ ವಿಶೇಷ ಘಟಕದೊಂದಿಗೆ ದೇಶದ ವಿವಿಧ ಭಾಗಗಳನ್ನು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಸ್ಪೋಟಕಗಳು ಹಾಗೂ ಮಾರಕಾಸ್ತ್ರಗಳನ್ನು ಬಳಕೆ ಮಾಡಿ ದೇಶದ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದಾನೆ ಎಂಬುದು ಎಫ್​ಐಆರ್​ನಲ್ಲಿ ತಿಳಿದುಬಂದಿದೆ. ದಾವೂದ್​ ಇಬ್ರಾಹಿಂ ಮುಖ್ಯವಾಗಿ ಮುಂಬೈ ಹಾಗೂ ದೆಹಲಿ ಮೇಲೆ ಕಣ್ಣಿಟ್ಟಿದ್ದಾನೆ ಎನ್ನಲಾಗಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ಇಡಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್, ಆತನ ಸಹಾಯಕರು ಮತ್ತು ಗ್ಯಾಂಗ್ ಸದಸ್ಯರನ್ನು ಇಡಿ ವಿಚಾರಣೆ ನಡೆಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...