alex Certify ಹಾಲಿ ಪ್ರೇಮಿಯೊಂದಿಗೆ ಸೇರಿ ಮಾಜಿ ಪ್ರಿಯಕರನ ಹತ್ಯೆಗೈದ ಅಪ್ರಾಪ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿ ಪ್ರೇಮಿಯೊಂದಿಗೆ ಸೇರಿ ಮಾಜಿ ಪ್ರಿಯಕರನ ಹತ್ಯೆಗೈದ ಅಪ್ರಾಪ್ತೆ..!

ರಾಯ್‍ಪುರ: ಹಾಲಿ ಪ್ರೇಮಿಯೊಂದಿಗೆ ಸೇರಿಕೊಂಡು ಮಾಜಿ ಪ್ರಿಯಕರನನ್ನು 17 ವರ್ಷದ ಅಪ್ರಾಪ್ತೆ ಹತ್ಯೆಗೈದಿರುವ ಘಟನೆ ರಾಯ್‍ಪುರದಲ್ಲಿ ನಡೆದಿದೆ.

ಮೃತನನ್ನು 17 ವರ್ಷದ ನರೇಂದ್ರ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. ಡೆಹ್ರಾಡೂನ್‌ನ ಆಮ್ವಾಲಾ ತರ್ಲಾ ಪ್ರದೇಶದ ಕಾಡಿನಲ್ಲಿ ಆತನ ಶವ ಪತ್ತೆಯಾಗಿದೆ. ಮಾರ್ಚ್ 16 ರಂದು ಬಂಟಿ ಕಾಣೆಯಾಗಿದ್ದ, ಹೀಗಾಗಿ ಆತನ ಕುಟುಂಬಸ್ಥರು ದಲನ್‌ವಾಲಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಅದೇ ವೇಳೆ 17 ವರ್ಷದ ಅಪ್ರಾಪ್ತೆ ಕೂಡ ರಾಯ್‌ಪುರ ಪ್ರದೇಶದಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಮಾರ್ಚ್ 20 ರಂದು ದೂರು ದಾಖಲಿಸಲಾಗಿದೆ. ಪೊಲೀಸರು ಶೀಘ್ರದಲ್ಲೇ ಅಪ್ರಾಪ್ತೆಯ ಹುಡುಕಾಟಕ್ಕೆ ಮುಂದಾಗಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಆಕೆಯ ಫೋಟೋಗಳನ್ನು ವಿತರಿಸಿದ್ದಾರೆ.

ಕೊನೆಗೂ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಬಾಲಕಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ಆಕೆಯ ಪ್ರಿಯಕರ ಆಕಾಶ್ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಈ ವೇಳೆ ಕೊಲೆಯಾದ ನರೇಂದ್ರನ ಬಗ್ಗೆ ಆಘಾತಕಾರಿ ಮಾಹಿತಿಗಳು ಒಂದೊಂದಾಗಿ ಹೊರಬಂದಿದೆ.

ನರೇಂದ್ರ ತನ್ನ ಮಾಜಿ ಗೆಳೆಯ ಎಂದು ತನಿಖಾಧಿಕಾರಿಗೆ ಅಪ್ರಾಪ್ತೆ ತಿಳಿಸಿದ್ದಾಳೆ. ಕೆಲ ತಿಂಗಳ ಹಿಂದೆ ಆತನೊಂದಿಗೆ ಸಂಬಂಧ ಮುರಿದುಕೊಂಡು ಫೇಸ್‍ಬುಕ್‍‍ನಲ್ಲಿ ಆಕಾಶ್ ಎಂಬಾತನ ಪರಿಚಯವಾಗಿದೆ. ಇವರಿಬ್ಬರು ಮದುವೆಯಾಗಲು ಕೂಡ ನಿರ್ಧರಿಸಿದ್ದರು.

ಆಕಾಶ್ ವಿಚಾರ ತಿಳಿದ ನರೇಂದ್ರ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ತಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದು ನರೇಂದ್ರನಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ರೂ, ಆತ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಹೀಗಾಗಿ ಪ್ರಿಯತಮ ಆಕಾಶ್ ಜೊತೆ ಪ್ಲಾನ್ ಮಾಡಿದ ಬಾಲಕಿ, ಆತನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಾಳೆ. ನರೇಂದ್ರನನ್ನು ತನ್ನ ಮನೆಗೆ ಕರೆಸಿಕೊಂಡು ಆತನ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ಶವವನ್ನು ಕಾಡಿನಲ್ಲಿ ಹೂತು ಹಾಕಿದ್ದರು. ಪ್ರಕರಣ ಸಂಬಂಧ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಮಾಹಿತಿ ಮೇರೆಗೆ ಬಂಟಿಯ ಶವವನ್ನು ಕಾಡಿನಲ್ಲಿ ಪತ್ತೆಯಾಗಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...