alex Certify ಮಳೆಗಾಲದಲ್ಲಿ ಹಸಿ ತರಕಾರಿ ಬಳಸುವ ಮುನ್ನ….. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಹಸಿ ತರಕಾರಿ ಬಳಸುವ ಮುನ್ನ…..

ಮಳೆಗಾಲ ಬಂದಾಯ್ತು. ಬೇಸಿಗೆಯಲ್ಲಿ ಹಸಿ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ಎನ್ನುತ್ತಿದ್ದ ಸಂದೇಶಗಳು ಈಗ ಬೇಯಿಸಿದ ಆಹಾರವನ್ನೇ ಸೇವಿಸಿ ಎಂದು ಬದಲಾಗಬೇಕಿದೆ.

ಹೌದು, ಬೇಸಿಗೆಯಲ್ಲಿ ಹಸಿ ಆಹಾರ ತಿಂದು ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಿ ಎನ್ನಲಾಗುತ್ತಿತ್ತು. ಮಳೆಗಾಲದಲ್ಲಿ ದೇಹ ತಂಪಾಗಿ ಶೀತವಾಗದಂತೆ ತಡೆಗಟ್ಟಲು ಬೆಚ್ಚಗಿನ, ಬೇಯಿಸಿದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಯಾವುದೇ ತರಕಾರಿ, ಸೊಪ್ಪು ಅಥವಾ ಮಾಂಸಾಹರವಿರಲಿ ಮಳೆಗಾಲದಲ್ಲಿ ಅದನ್ನು ಸ್ವಚ್ಛವಾಗಿ ತೊಳೆದು ಬೇಯಿಸುವುದು ಬಹಳ ಮುಖ್ಯ. ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿದಷ್ಟೂ ಅದರ ಪೋಷಕಾಂಶಗಳು ನಾಶವಾಗುತ್ತವೆ. ಬಟಾಟೆ, ಗೆಣಸಿನಂಥ ತರಕಾರಿಗಳನ್ನು ಸಿಪ್ಪೆ ಸಮೇತ ಬೇಯಿಸಿ ಬಳಿಕ ಸಿಪ್ಪೆ ತೆಗೆಯುವುದು ಒಳ್ಳೆಯದು.

ಟೊಮೆಟೊ, ಕ್ಯಾರೆಟ್, ಮೂಲಂಗಿ ಮೊದಲಾದ ತರಕಾರಿಗಳಿಗೆ ಬೇಗ ಹಾಳಾಗಬಾರದು ಎಂಬ ಕಾರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿರುತ್ತಾರೆ. ಹಾಗಾಗಿ ಇವುಗಳನ್ನು ಹಸಿಯಾಗಿ ಸೇವಿಸುವುದು ಬೇಡವೇ ಬೇಡ. ಅದರ ಬದಲು ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ನೆನೆಹಾಕಿ, ಬಳಿಕ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...