alex Certify ಹಬ್ಬಕ್ಕೆ ಮಾಡಿ ಈ ಸಿಹಿತಿಂಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಮಾಡಿ ಈ ಸಿಹಿತಿಂಡಿ

ಬೇಕಾಗುವ ಸಾಮಾಗ್ರಿಗಳು:

ಮೈದಾ ಹಿಟ್ಟು – 250 ಗ್ರಾಂ, ಸಕ್ಕರೆ – 200 ಗ್ರಾಂ, ತುಪ್ಪ – 1/4 ಕಪ್, ಏಲಕ್ಕಿ – ಸ್ವಲ್ಪ, ಮೊಸರು – 2 ಟೀ ಸ್ಪೂನ್, ಅಡುಗೆ ಸೋಡಾ-ಚಿಟಿಕೆ, ಕರಿಯಲು ಎಣ್ಣೆ, ಲಿಂಬೆರಸ- ಸ್ವಲ್ಪ.

ಬಾಯಲ್ಲಿ ನೀರೂರಿಸುವ ಕಡಲೇಬೀಜ ಉಂಡೆ ಸವಿಯಿರಿ

ಮಾಡುವ ವಿಧಾನ: ಒಂದು ಪಾತ್ರೆಗೆ ಸಕ್ಕರೆ ಹಾಕಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಂದೆಳೆ ಪಾಕ ಬರುವಷ್ಟು ಕುದಿಸಿ. ನಂತರ ಈ ಸಕ್ಕರೆ ಪಾಕಕ್ಕೆ 5 ಹನಿಗಳಷ್ಟು ನಿಂಬೆರಸ ಸೇರಿಸಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಗೂ ಚಿಟಿಕೆ ಸೋಡಾ, ಮೊಸರು ಹಾಕಿ.

ನಂತರ ಮೈದಾ ಹಿಟ್ಟು ಹಾಕಿ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಸ್ವಲ್ಪ ಸ್ವಲ್ಪನೇ ನೀರು ಹಾಕಿ ಕಲಸಿಕೊಳ್ಳಿ. 5 ನಿಮಿಷ ಚೆನ್ನಾಗಿ ನಾದಿಕೊಳ್ಳಿ. ನಂತರ ಒಂದು ಚಿಕ್ಕ ಉಂಡೆ ತೆಗೆದುಕೊಂಡು ಬೆರಳಿನಿಂದ ಮಧ್ಯಕ್ಕೆ ಒತ್ತಿ ಬಿಸಿ ಎಣ್ಣೆಯಲ್ಲಿ ಕರಿಯಿರಿ. ಚೆನ್ನಾಗಿ ಕರಿದ ಬಾದೂಷವನ್ನು ಸಕ್ಕರೆ ಪಾಕಕ್ಕೆ ಹಾಕಿ 20 ನಿಮಿಷ ಹಾಗೆಯೇ ಬಿಡಿ. ನಂತರ ಸರ್ವಿಂಗ್ ಪ್ಲೇಟ್ ಗೆ ವರ್ಗಾಯಿಸಿದರೆ ಸವಿಯಲು ಬಾದೂಷಾ ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...