alex Certify ಹಣ ಕೊಡದೇ ಸತಾಯಿಸಿದವನ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ ಕಾರ್ಮಿಕ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಕೊಡದೇ ಸತಾಯಿಸಿದವನ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ ಕಾರ್ಮಿಕ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಸೋಶಿಯಲ್ ಮೀಡಿಯಾದಲ್ಲಿ ಕ್ಷಣ ಕ್ಷಣಕ್ಕೂ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ. ಅದರಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಂಥವರನ್ನೂ ಕೂಡಾ ಬೆಚ್ಚಿಬೀಳಿಸೋ ಹಾಗಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್‌ಲ್ಲಿ ಬಂದು ಒಂದು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಝ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೆ. ಬೆಂಕಿ ಹಚ್ಚಿದ ನಂತರ ಏನೂ ಆಗೇ ಇಲ್ಲ ಅಂತ ಮತ್ತೆ ಬೈಕ್ ಏರಿ ಹೊರಟು ಹೋಗಿ ಬಿಡುತ್ತಾನೆ. ಈ ವಿಡಿಯೋ ನೋಡಿ ಜನ ಶಾಕ್ ಆಗಿದ್ದಾರೆ.

ನೋಯ್ಡಾ ಪೊಲೀಸ್ ಠಾಣೆಯ ಸೆಕ್ಟರ್-39 ಪ್ರದೇಶದ ಸದರ್ಪುರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಣವೀರ್ ಅನ್ನುವ ವ್ಯಕ್ತಿ ಈ ಕೃತ್ಯವನ್ನ ಮಾಡಿದ್ದು, ಈತ ಕೆಲ ತಿಂಗಳ ಹಿಂದೆ ಈ ಮರ್ಸಿಡಿಸ್ ಕಾರ್ ಮಾಲೀಕ ಆಯುಷ್ ಅವರ ಮನೆಗೆ ಟೈಲ್ಸ್‌‌ ಹಾಕುವ ಕೆಲಸ ಮಾಡಿದ್ದ.

ಅದಕ್ಕಾಗಿ ಕಾರ್ಮಿಕ ರಣವೀರ್, ಆಯುಷ್ ಬಳಿ ಹೋಗಿ 5 ಲಕ್ಷ ರೂಪಾಯಿ ಬಿಲ್ ಆಗಿರುವುದಾಗಿ ಹೇಳಿದ್ಧಾನೆ. ಆದರೆ ಆಯುಷ್ ಕೇವಲ 2.68 ಲಕ್ಷ ರೂಪಾಯಿ ಕೊಟ್ಟು ಉಳಿದ ಹಣ ಕೊಡದೇ ಸತಾಯಿಸಿದ್ದಾನೆ. ಪದೇ ಪದೇ ಬಾಕಿ ಹಣ ಕೇಳಿದ್ದರೂ ಆಯುಷ್ ಆಗಲಿ, ಇಲ್ಲಾ ಆತನ ಮನೆಯವರಾಗಲಿ ಬಾಕಿ ಹಣ ಕೊಡುವುದರ ಬಗ್ಗೆ ಮಾತೇ ಆಡುತ್ತಿರಲಿಲ್ಲ. ಕೊನೆಗೆ ತಾಳ್ಮೆ ಕಳೆದುಕೊಂಡ ರಣವೀರ್ ತನ್ನ ಹಣ ವಾಪಸ್ ಬರುವ ಲಕ್ಷಣವೇ ಕಾಣದಿದ್ದಾಗ ಬೈಕ್‌ಲ್ಲಿ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸೇಡನ್ನ ತೀರಿಸಿಕೊಂಡಿದ್ಧಾನೆ.

ಮರ್ಸಿಡಿಸ್ ಬೆಂಝ್ ಕಾರ್‌ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದರೂ ತಾನಾಗಿ ಬೆಂಕಿ ಆರಿ ಹೋಗುವ ವ್ಯವಸ್ಥೆ ಮಾಡಲಾಗಿರುತ್ತೆ. ಆದ್ದರಿಂದ ಕಾರಿಗೆ ಯಾವುದೇ ರೀತಿ ಹಾನಿಯಾಗಿಲ್ಲ. ಆದರೆ ಈ ಘಟನೆ ಅಲ್ಲೇ ಇರುವ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು. ಇದರ ಆಧಾರದ ಮೇಲೆ ಬೈಕ್ ಪ್ಲೇಟ್ ಸಹಾಯದಿಂದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...