alex Certify ಹಣೆಗೆ ತಿಲಕವಿಟ್ಟು ಹಿಂದೂ ದೇವಾಲಯ ಪ್ರವೇಶಿಸಿದ ಮುಸ್ಲಿಂ ವ್ಯಕ್ತಿ, ಹನುಮಾನ್‌ ವಿಗ್ರಹ ಧ್ವಂಸ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣೆಗೆ ತಿಲಕವಿಟ್ಟು ಹಿಂದೂ ದೇವಾಲಯ ಪ್ರವೇಶಿಸಿದ ಮುಸ್ಲಿಂ ವ್ಯಕ್ತಿ, ಹನುಮಾನ್‌ ವಿಗ್ರಹ ಧ್ವಂಸ!  

ಉತ್ತರ ಪ್ರದೇಶದ ಲಕ್ನೋದಲ್ಲಿ ಮುಸಲ್ಮಾನ್‌ ವ್ಯಕ್ತಿಯೊಬ್ಬ ಹಿಂದೂ ದೇವಾಲಯದಲ್ಲಿ ಹನುಮಾನ್‌ ವಿಗ್ರಹವನ್ನು ಧ್ವಂಸ ಮಾಡಿದ್ದಾನೆ. ಆತನ ಮೇಲೆ ಪ್ರಕರಣ ಸಹ ದಾಖಲಾಗಿದೆ. ಸಪ್ಟೆಂಬರ್‌ 7 ರಂದು ಲಕ್ನೋದ ಗೋಮ್ತಿ ದಂಡೆಯಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಆರೋಪಿಯನ್ನು ತೌಫೀಕ್ ಅಹ್ಮದ್ ಎಂದು ಗುರುತಿಸಲಾಗಿದೆ. ಆರೋಪಿ ಹಣೆಗೆ ತಿಲಕವಿಟ್ಟುಕೊಂಡು ದೇವಸ್ಥಾನದ ಆವರಣಕ್ಕೆ ನುಗ್ಗಿದ್ದ. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ದೇವರ ವಿಗ್ರಹವನ್ನು ಧ್ವಂಸ ಮಾಡಲು ಆರಂಭಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೇವಸ್ಥಾನ ಪ್ರವೇಶಿಸಿದ ತೌಫೀಕ್ ಮೊದಲು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದರು ಮತ್ತು ನಂತರ ವಿಗ್ರಹಗಳನ್ನು ಒಡೆಯಲು ಕಲ್ಲು ಎಸೆದಿದ್ದಾನೆ. ಆರೋಪಿ ದೇವಾಲಯದ ಧ್ವಜವನ್ನು ಸಹ ಹರಿದಿದ್ದಾನೆ. ಘಟನೆ ಬಳಿಕ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವಾಲಯದಲ್ಲಿ ಎರಡು ವಿಗ್ರಹಗಳು ಭಗ್ನಗೊಂಡಿವೆ. ಕಸ್ಟಡಿಗೆ ಪಡೆದಿರುವ ಆರೋಪಿ ತೌಫೀಕ್‌ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಅಂತಾ ಪೊಲೀಸರು ಹೇಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...