alex Certify ಹಠಾತ್ ಸಾವನ್ನಪ್ಪಿದ 27 ಕುರಿಗಳು; ಕಾರಣ ಪತ್ತೆಗೆ ಮುಂದಾದ ಪಶು ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಠಾತ್ ಸಾವನ್ನಪ್ಪಿದ 27 ಕುರಿಗಳು; ಕಾರಣ ಪತ್ತೆಗೆ ಮುಂದಾದ ಪಶು ವೈದ್ಯರು

ಬೆಳಗಾವಿ | ಸುವರ್ಣ ಸೌಧದ ಬಳಿ ತಿಪ್ಪೆಗೆ ಬಿಸಾಡಿದ್ದ ಆಹಾರ ಸೇವಿಸಿ 10 ಕುರಿಗಳ ಸಾವು |  Eedina | ಈದಿನನೂರಾರು ಕುರಿಗಳು ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ವೇಳೆ ಇವುಗಳ ಪೈಕಿ 27 ಕುರಿಗಳು ಹಠಾತ್ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ ಗ್ರಾಮದ ತೋಟವೊಂದರಲ್ಲಿ ಚಿಲಮೂರ ಗ್ರಾಮದ ವಿಠ್ಠಲ ಲಕ್ಕಪ್ಪ ಸನದಿ ಅವರಿಗೆ ಸೇರಿದ ನೂರಕ್ಕೂ ಅಧಿಕ ಕುರಿಗಳು ಬೀಡು ಬಿಟ್ಟಿದ್ದವು.

ಸೋಮವಾರ ಬೆಳಿಗ್ಗೆ ವಿಠಲ ಅವರು ಕುರಿಗಳೊಂದಿಗೆ ರಾಮದುರ್ಗಕ್ಕೆ ಹೊರಟಿದ್ದು, ಈ ವೇಳೆ ಮಾರ್ಗ ಮಧ್ಯೆ 27 ಕುರಿಗಳು ಏಕಾಏಕಿ ಮೃತಪಟ್ಟಿವೆ.

ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೋಗ ಅಥವಾ ವಿಷಯುಕ್ತ ಆಹಾರ ಸೇವನೆಯಿಂದ ಮೃತಪಟ್ಟಿವೆಯೇ ಎಂಬುದರ ಕಾರಣ ಅರಿಯಲು ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...