alex Certify ಹಗಲು ಹೊತ್ತಿನಲ್ಲಿಯೇ ದರೋಡೆಗೆ ಯತ್ನ; ಮಹಿಳೆಯ ಧೈರ್ಯದಿಂದ ಸಿಕ್ಕಿ ಬಿದ್ದ ಕಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಗಲು ಹೊತ್ತಿನಲ್ಲಿಯೇ ದರೋಡೆಗೆ ಯತ್ನ; ಮಹಿಳೆಯ ಧೈರ್ಯದಿಂದ ಸಿಕ್ಕಿ ಬಿದ್ದ ಕಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಹಗಲು ಹೊತ್ತಿನಲ್ಲಿಯೇ ಚಿನ್ನದ ವ್ಯಾಪಾರಿಯ ಮನೆಗೆ ನುಗ್ಗಿ ಕದಿಯಲು ಹೋಗಿ ಮಹಿಳೆಯೊಬ್ಬಳು ಸಿಕ್ಕಿ ಬಿದ್ದಿದ್ದಾಳೆ.

ನಾಲ್ಕೈದು ಜನ ಆಂಧ್ರ ಮೂಲದ ಮಹಿಳೆಯರು ನಗರದ ಮಾರುತಿ ಬಡಾವಣೆಯಲ್ಲಿನ ಚಿನ್ನದ ವ್ಯಾಪಾರಿ ರವಿ ಬಡಿಗೇರಿ ಎಂಬುವವರ ಮನೆಗೆ ನುಗ್ಗಿದ್ದಾರೆ. ಆ ಸಂದರ್ಭದಲ್ಲಿ ಮನೆಯಲ್ಲಿ ವ್ಯಾಪಾರಿಯ ಮಡದಿ ಇದ್ದಾರೆ. ಆದರೂ ಇವರು ಕಳ್ಳತನಕ್ಕಾಗಿ ಒಳ ನುಗ್ಗಿದ್ದಾರೆ.

ಯಾರಿಗೂ ತಿಳಿಯದಂತೆ ಒಳ ನುಗ್ಗಿ ಹಣ ಹಾಗೂ ಚಿನ್ನ ಇಟ್ಟಿದ್ದ ಅಲ್ಮೇರಾ ತೆರೆಯುವ ಪ್ರಯತ್ನ ಮಾಡಿದ್ದಾರೆ. ಸದ್ದಾಗುತ್ತಿದ್ದಂತೆ ಮಾಲೀಕನ ಪತ್ನಿ ಹೊರಗೆ ಬಂದಿದ್ದಾರೆ. ಕೂಡಲೇ ಇವರನ್ನು ಕಂಡು ಕಿರುಚಿದ್ದಾರೆ. ಆದರೆ, ಅವರ ಮುಖಕ್ಕೆ ಯಾವುದೋ ಪೌಡರ್ ನ್ನು ಈ ಕಳ್ಳಿಯರು ಎರಚಿದ್ದಾರೆ.

ಆದರೂ ಆ ಗೃಹಿಣಿ ಮಾತ್ರ ಮನೆಯಲ್ಲಿದ್ದ ಹರಿತಾದ ಆಯುಧ ಹಿಡಿದುಕೊಂಡು ಬಂದು ಇವರನ್ನು ಹೆದರಿಸಲು ಮುಂದೆ ಬಂದಿದ್ದಾರೆ. ಆಗ ಆಂಧ್ರಮೂಲದ ದರೋಡೆಕೋರ ಮಹಿಳೆಯರು ಓಡಿ ಹೋಗಿದ್ದಾರೆ. ಕೂಡಲೇ ಗಮನಿಸಿದ ಸ್ಥಳಿಯರು ಇವರನ್ನು ಬೆನ್ನಟ್ಟಿದ್ದಾರೆ. ನಾಲ್ವರ ಪೈಕಿ ಓರ್ವ ಮಹಿಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳೆಯನ್ನು ವಶಕ್ಕೆ ಪಡೆದು, ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...