alex Certify ಹಂತಕರು ಮಚ್ಚು ಬೀಸುತ್ತಿದ್ದರೂ‌ ನೆರವಿಗೆ ಯಾರೂ ಬರಲಿಲ್ಲ; ಕನ್ನಯ್ಯ ಲಾಲ್‌ ಸಹೋದ್ಯೋಗಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂತಕರು ಮಚ್ಚು ಬೀಸುತ್ತಿದ್ದರೂ‌ ನೆರವಿಗೆ ಯಾರೂ ಬರಲಿಲ್ಲ; ಕನ್ನಯ್ಯ ಲಾಲ್‌ ಸಹೋದ್ಯೋಗಿ ಹೇಳಿಕೆ

ಮಂಗಳವಾರದಂದು ಮುಸ್ಲಿಂ ಮೂಲಭೂತವಾದಿಗಳಿಂದ ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್‌ ಕನ್ನಯ್ಯ ಲಾಲ್‌ ಅವರ ಬರ್ಬರ ಹತ್ಯೆಯಾಗಿದೆ. ಅಳತೆ ಕೊಡುವ ಸೋಗಿನಲ್ಲಿ ಕನ್ನಯ್ಯ ಲಾಲ್‌ ಅವರ ಅಂಗಡಿಗೆ ಬಂದ ಇಬ್ಬರು ಹಂತಕರು ಪೈಶಾಚಿಕತೆ ಮೆರೆದಿದ್ದಾರೆ.

ಅಷ್ಟೇ ಅಲ್ಲ ಹಂತಕರ ಪೈಕಿ ಒಬ್ಬ ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಕನ್ನಯ್ಯ ಲಾಲ್‌ ಹತ್ಯೆ ಮಾಡುವ ವೇಳೆ ಅವರ ಜೊತೆಗಿದ್ದ ಈಶ್ವರ್‌ ಸಿಂಗ್ ಎಂಬವರು ಇದನ್ನು ತಡೆಯಲು ತೀವ್ರ ಪ್ರಯತ್ನ ನಡೆಸಿದ್ದರಾದರೂ ಸಾಧ್ಯವಾಗಿರಲಿಲ್ಲ.

ಈಶ್ವರ್‌ ಸಿಂಗ್ ಅವರ ಮೇಲೂ ಹಂತಕರು ಮಚ್ಚು ಬೀಸಿದ್ದು, ಇದರಿಂದ ಗಾಯಗೊಂಡಿದ್ದ ಅವರನ್ನು ಉದಯ್ಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.  ಇದೀಗ ಚೇತರಿಸಿಕೊಂಡಿರುವ ಈಶ್ವರ್‌ ಲಾಲ್‌ ಮಾಧ್ಯಮಗಳ ಮುಂದೆ ಅಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಬ್ಬರು ಆರೋಪಿಗಳ ಪೈಕಿ ಒಬ್ಬ ಅಳತೆ ನೀಡಲು ಮುಂದಾದ ವೇಳೆ ಕನ್ನಯ್ಯ ಟೇಪ್‌ ನಿಂದ ಅಳತೆ ತೆಗೆದುಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ತಮ್ಮ ವರಸೆ ಬದಲಿಸಿದ ಹಂತಕರು ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡತೊಡಗಿದರು. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕನ್ನಯ್ಯ ಕೇಳಿದರೂ ಅವರು ಕಿವಿಗೊಡಲಿಲ್ಲ ಎಂದಿದ್ದಾರೆ.

ಆಗ ಅಲ್ಲಿದ್ದ ಮತ್ತೊಬ್ಬ ನೌಕರ ಸ್ಥಳದಿಂದ ಓಡಿದ. ನಾನು ತಡೆಯಲು ಮುಂದಾದಾಗ ನನ್ನ ಮೇಲೂ ದಾಳಿ ನಡೆಸಿದರು. ಅಲ್ಲದೇ ಕನ್ನಯ್ಯ ಲಾಲ್‌ ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದಿದ್ದರೂ ಅವರಿಗೆ ಮತ್ತೆ ಮತ್ತೆ ಇರಿದರು ಎಂದು ಈಶ್ವರ್‌ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...