alex Certify ಸ್ನೇಹಿತನ ಮಾತು ನಂಬಿ ಹೋದ ಗೆಳತಿಯ ಮೇಲೆ ಎರಗಿದ ಕಾಮುಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನ ಮಾತು ನಂಬಿ ಹೋದ ಗೆಳತಿಯ ಮೇಲೆ ಎರಗಿದ ಕಾಮುಕರು

ಥಾಣೆ : ಸ್ನೇಹಿತ ಫೋನ್ ಮಾಡಿ ಕರೆದಿದ್ದಾನೆಂದು ಆತನ ಮೇಲಿನ ನಂಬಿಕೆಯಿಂದ ಯುವತಿ ಆತ ಹೇಳಿದ್ದ ಸ್ಥಳಕ್ಕೆ ಹೋಗಿದ್ದಾಳೆ.

ಆದರೆ, ಅಲ್ಲಿ ಕುಡಿಯುತ್ತ ಕುಳಿತಿದ್ದ ಕಾಮುಕರು, ಆಕೆಯ ಮೇಲೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಮಹಾರಾಷ್ಟ್ರದ ಅಂಬರನಾಥ್ ನಲ್ಲಿ ನಡೆದಿದ್ದು, 21 ವರ್ಷದ ಯುವತಿಯೊಬ್ಬರನ್ನು ಆಕೆಯ ಸ್ನೇಹಿತ ಫೋನ್ ಮಾಡಿ ಕರೆದಿದ್ದಾನೆ. ಅದಕ್ಕೂ ಮುನ್ನ ಈ ಸ್ಥಳದಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಮದ್ಯ ಸೇವಿಸಿದ ಅಮಲಿನಲ್ಲಿಯೇ ಆತ ಸ್ನೇಹಿತೆಗೆ ಕರೆ ಮಾಡಿ ಆ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ.

ಯುವತಿ ಬರುತ್ತಿದ್ದಂತೆ ಆಕೆಯ ಸ್ನೇಹಿತ ಹನುಮಾನ್ ಹಾಗೂ ಆತನ ಸ್ನೇಹಿತರಾದ ಜಾವೀದ್, ವಿಶ್ವಾಸ್ ಎಂಬ ಮೂವರು ಕಾಮುಕರು ಅತ್ಯಾಚಾರ ನಡೆಸಿದ್ದಾರೆ. ಆ ನಂತರ ಮದ್ಯದ ಬಾಟಲಿಯಿಂದ ಯುವತಿಗೆ ಚಿತ್ರ ಹಿಂಸೆ ನೀಡಿದ್ದಾರೆ. ಈ ಘಟನೆಯನ್ನು ಯಾರ ಮುಂದೆಯಾದರೂ ಹೇಳಿದರೆ ಜೀವಂತ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ.

ಘಟನೆಯ ನಂತರ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...