alex Certify ಸೋಲುವುದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ; 227 ನೇ ಬಾರಿಗೆ ನಾಮಪತ್ರ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಲುವುದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ; 227 ನೇ ಬಾರಿಗೆ ನಾಮಪತ್ರ ಸಲ್ಲಿಕೆ

ಕೊಯಮತ್ತೂರು: ಚುನಾವಣೆ ಎಂದರೆ ಬಹುತೇಕರು ಗೆಲ್ಲುವುದಕ್ಕಾಗಿ ಹರಸಾಹಸ ಪಡುತ್ತಿರುತ್ತಾರೆ. ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬುವುದು ಅವರ ಅಭಿಲಾಷೆಯಾಗಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸೋಲುವುದಕ್ಕಾಗಿಯೇ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುತ್ತಾರೆ. ಅತೀ ಹೆಚ್ಚು ಬಾರಿ ವಿಫಲವಾದ ವ್ಯಕ್ತಿ ಎಂಬ ದಾಖಲೆ ಇವರ ಹೆಸರಿನಲ್ಲಿದೆ. ಈಗ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕೆ. ಪದ್ಮರಾಜನ್ ಎಂಬುವವರೇ ಈ ರೀತಿ ನಾಮಪತ್ರ ಸಲ್ಲಿಕೆ ಮಾಡುವವರು. ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ ಇರಲಿ, ಅಲ್ಲಿಗೆ ತೆರಳಿ ಸ್ಪರ್ಧೆ ಮಾಡುವುದೇ ಇವರ ವೃತ್ತಿಯಾಗಿ ಬಿಟ್ಟಿದೆ.

ದೇಶದ ಘಟಾನುಘಟಿಗಳೊಂದಿಗೂ ಇವರು ಸ್ಪರ್ಧೆ ಮಾಡಿದ್ದಾರೆ. ಇವರು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಪ್ರಣಬ್ ಮುಖರ್ಜಿ, ಪಿ.ವಿ. ನರಸಿಂಹ್ ರಾವ್, ಮನಮೋಹನ್ ಸಿಂಗ್, ಪ್ರತಿಭಾ ಪಾಟೀಲ್ ಸೇರಿದಂತೆ ಹಲವು ನಾಯಕರ ವಿರುದ್ಧವೂ ಸ್ಪರ್ಧೆ ಮಾಡಿದ್ದಾರೆ.

ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಅವರು ಈಗ 227ನೇ ಬಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅವರಿಗೆ 62 ವರ್ಷವಾಗಿದ್ದರೂ ತಮ್ಮ ನಾಮಪತ್ರ ಸಲ್ಲಿಕೆಯ ಕಾಯಕವನ್ನು ಮಾತ್ರ ಬಿಡುತ್ತಿಲ್ಲ. ಫೆ.19ರಂದು ನಡೆಯುವ ಈ ಚುನಾವಣೆಯಲ್ಲಿ ಇವರು ವೆರಕಲ್ಪುದೂರ್ ಎರಡನೇ ವಾರ್ಡ್ ನಿಂದ ಸ್ಪರ್ಧೆಗೆ ಇಳಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...