alex Certify ಸುರ್ಜೆವಾಲರಿಂದ ಕುಸಿದಿರುವ ಸೇತುವೆ ವಿಡಿಯೋ ಶೇರ್; ಕಮಿಷನ್ ನಲ್ಲಿ ಮುಳುಗಿದೆ ಬಿಜೆಪಿ ಸರ್ಕಾರ ಎಂದು ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರ್ಜೆವಾಲರಿಂದ ಕುಸಿದಿರುವ ಸೇತುವೆ ವಿಡಿಯೋ ಶೇರ್; ಕಮಿಷನ್ ನಲ್ಲಿ ಮುಳುಗಿದೆ ಬಿಜೆಪಿ ಸರ್ಕಾರ ಎಂದು ಟಾಂಗ್

ಕುಂದಾಪುರದ ಗಂಗೊಳ್ಳಿಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೀಗ ಇದೇ ವಿಡಿಯೋವನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆಡಳಿತರೂಢ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಅವರು, ಈ ಸೇತುವೆ ನೀರಿನಲ್ಲಿ ಮುಳುಗಿರುವಂತೆಯೇ 2023 ರಲ್ಲಿ ನಿಮ್ಮ ಸರ್ಕಾರವನ್ನು ಜನ ಮುಳುಗಿಸುತ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇತುವೆಗಳು ನೀರಿನಲ್ಲಿ ಮುಳುಗುತ್ತಿದ್ದರೆ, ಭ್ರಷ್ಟ ಸರ್ಕಾರ ಕಮಿಷನ್ ನಲ್ಲಿ ಮುಳುಗಿ ಹೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕಳಪೆ ಕಾಮಗಾರಿ ವಿರುದ್ಧ ತನಿಖೆ ನಡೆಸುತ್ತೀರೋ ಅಥವಾ ಅದನ್ನೂ ಮುಳುಗಿಸುತ್ತೀರೋ?

ಈ ಸೇತುವೆ ಮುಳುಗಿದಂತೆ 2023ಕ್ಕೆ ಜನ ನಿಮ್ಮನ್ನೂ ಮುಳುಗಿಸಲಿದ್ದಾರೆ ನೆನಪಿರಲಿ pic.twitter.com/UCgc1vcozQ

— Randeep Singh Surjewala (@rssurjewala) September 29, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...