alex Certify ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿದ್ದ ಹಣವನ್ನೇ ಎಗರಿಸಿದ ಯುಪಿಯ ಹಂಗಾಮಿ ಪೋಸ್ಟ್‌ ಮಾಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿದ್ದ ಹಣವನ್ನೇ ಎಗರಿಸಿದ ಯುಪಿಯ ಹಂಗಾಮಿ ಪೋಸ್ಟ್‌ ಮಾಸ್ಟರ್

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಠೇವಣಿ ಮಾಡಿದ್ದ ಲಕ್ಷಾಂತರ ರೂಪಾಯಿ, ಉತ್ತರ ಪ್ರದೇಶದ ಅಂಚೆ ಕಚೇರಿಯಿಂದ ಕಾಣೆಯಾಗಿದೆ. ಈ ಪ್ರಕರಣ ಯುಪಿಯ ಬಾಗಪತ್ ಜಿಲ್ಲೆಯ ಬಾರೌತ್ ಪ್ರದೇಶದ ಅಂಚೆ ಕಚೇರಿಯಲ್ಲಿ ನಡೆದಿದೆ.

ಅಂಚೆ ಇಲಾಖೆ, ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಹಂಗಾಮಿ ಪೋಸ್ಟ್ ಮಾಸ್ಟರ್ ಅನ್ನು ಅಮಾನತು ಮಾಡಿದೆ. ಆತನ ವಿರುದ್ಧ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಗ್ರಾಮಸ್ಥರು ಈ ಗ್ರಾಮದ ಅಂಚೆ ಕಚೇರಿಯಲ್ಲಿ ಸುಮಾರು 18.50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಸುಕನ್ಯಾ ಸಮೃದ್ಧಿ ಯೋಜನೆ ಮಾತ್ರವಲ್ಲದೆ, ಉಳಿತಾಯ ಖಾತೆ ಮತ್ತು ಆರ್‌ಡಿಯ ಹಣ ಹೂಡಿದ್ದರು.

ಅಂಚೆ ಕಚೇರಿಯಲ್ಲಿ ಕೆಲಸ ಮಾಡ್ತಿರುವ ಹಂಗಾಮಿ ಪೋಸ್ಟ್ ಮಾಸ್ಟರ್ ದೇವೇಂದ್ರ ಈ ಮೊತ್ತವನ್ನು ಕದ್ದಿದ್ದಾರೆ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಖಾತೆದಾರರು ಅಸಮಾಧಾನಗೊಂಡಿದ್ದಾರೆ. ಸದ್ಯ ದೇವೇಂದ್ರನನ್ನು ಅಮಾನತು ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...