alex Certify ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕದ್ದುಕೊಂಡು ಹೋದ ಕಳ್ಳರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕದ್ದುಕೊಂಡು ಹೋದ ಕಳ್ಳರು…!

ಸಿಸಿ ಟಿವಿಗೆ ಸಗಣಿ ಮೆತ್ತಿದ್ದರ ಜೊತೆಗೆ ಅದರ ವೈರುಗಳನ್ನು ಕತ್ತರಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೊಬ್ಬರಿ ಚೀಲಗಳನ್ನು ಕದ್ದುಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುರುವೇಕೆರೆ ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ರೈತ ರವೀಂದ್ರ ಕುಮಾರ್ ಎಂಬವರ ಮನೆ ಮುಂದೆ ಇರಿಸಲಾಗಿದ್ದ 48 ಕೊಬ್ಬರಿ ಚೀಲಗಳನ್ನು ಕಳ್ಳತನ ಮಾಡಲಾಗಿದೆ.

ರಾತ್ರಿ 2 ಗಂಟೆ ಸುಮಾರಿಗೆ ಶಬ್ದ ಕೇಳಿ ರವೀಂದ್ರ ಕುಮಾರ್ ಹೊರಬರಲು ಪ್ರಯತ್ನಿಸಿದರಾದರು ಹೊರಗಡೆಯಿಂದ ಕಳ್ಳರು ಚಿಲಕ ಹಾಕಿದ್ದರು ಎನ್ನಲಾಗಿದೆ. ಇದೀಗ ಈ ಕಳ್ಳತನದಿಂದ ತಮಗೆ 1.50 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...