alex Certify ಸಿನಿಮಾ ಸ್ಟೈಲ್ ನಲ್ಲಿ ಪತ್ನಿ ಹತ್ಯೆಗೆ ಸಂಚು; ರೂಪಾ ಮರ್ಡರ್ ಕೇಸ್ ಬಗ್ಗೆ ಶಾಕಿಂಗ್ ವಿಷಯ ಬಾಯ್ಬಿಟ್ಟ ಪಾಪಿ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಸ್ಟೈಲ್ ನಲ್ಲಿ ಪತ್ನಿ ಹತ್ಯೆಗೆ ಸಂಚು; ರೂಪಾ ಮರ್ಡರ್ ಕೇಸ್ ಬಗ್ಗೆ ಶಾಕಿಂಗ್ ವಿಷಯ ಬಾಯ್ಬಿಟ್ಟ ಪಾಪಿ ಪತಿ

ಬೆಂಗಳೂರು: ಪತ್ನಿಯ ಕತ್ತು ಸೀಳಿ ಪತಿಯಿಂದಲೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿ ಮಹಾಶಯ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ.

ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಬ್ರೋಕರ್ ಕಾಂತರಾಜ್ ಸೆ.22ರಂದು ತನ್ನ ಪತ್ನಿ ರೂಪಾಳನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ಎಪಿ ನಗರ ಪೊಲೀಸರು ಆರೋಪಿ ಕಾಂತರಾಜ್ ನನ್ನು ಬಂಧಿಸಿದ್ದರು. ಇದೀಗ ವಿಚಾರಣೆ ವೇಳೆ ಪತ್ನಿಯನ್ನು ಸಿನಿಮಾ ಸ್ಟೈಲ್ ನಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಿ ಹೇಳಿದ್ದಾನೆ.

BIG NEWS: ಹೈಕೋರ್ಟ್ ನ 10 ನ್ಯಾಯಮೂರ್ತಿಗಳ ಪ್ರಮಾಣವಚನ ಸ್ವೀಕಾರ

ರೂಪಾಳನ್ನು ಪ್ರೀತಿಸಿ ವಿವಾಹವಾಗಿದ್ದ ಕಾಂತರಾಜ್ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಸವಾಗಿದ್ದ. ಆದರೆ ಕಾಂತರಾಜ್ ಗೆ ಪತ್ನಿಯ ಮೇಲೆ ಅನುಮಾನ….. ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಸಂಶಯ….. ಇದೇ ಕಾರಣಕ್ಕೆ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ.

ಪ್ರವಾಸಕ್ಕೆಂದು ಕರಾವಳಿ ಭಾಗಕ್ಕೆ ಕರೆದೊಯ್ದು ಎತ್ತರದ ಗುಡ್ಡದ ಮೇಲಿಂದ ತಳ್ಳಲು ಸಂಚು ರೂಪಿಸಿದ್ದ ಮೂರು ದಿನ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಇನ್ನೊಮ್ಮೆ ಆಕ್ಸಿಡೆಂಟ್ ಮಾಡಿ ಪತ್ನಿ ಹತ್ಯೆಗೆ ಸಂಚು ರೂಪಿಸಿದ್ದ ಅದೂ ಸಾಧ್ಯವಾಗದೇ ಮನೆಗೆ ವಾಪಸ್ ಆಗಿದ್ದ. ಬಳಿಕ ಸೆ.22ರಂದು ಮನೆಯಲ್ಲಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಮನೆಗೆ ಬೀಗಹಾಕಿ ಪರಾರಿಯಾಗಿದ್ದ. ಆರೋಪಿ ವಿಚಾರಣೆ ವೇಳೆ ಹತ್ಯೆಯ ಸಂಚನ್ನು ಬಾಯ್ಬಿಟ್ಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...