alex Certify ಸಿದ್ದುಗೆ ಮತ್ತೆ ಮುಳುವಾಗುತ್ತಾ ಹಿಂದು ಅಸ್ತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದುಗೆ ಮತ್ತೆ ಮುಳುವಾಗುತ್ತಾ ಹಿಂದು ಅಸ್ತ್ರ..!

ಬೆಂಗಳೂರು- ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಹಿಂದುತ್ವ ಅನ್ನೋ ವಿಚಾರವಾಗಿ ಆಡಿದ ಒಂದು ಮಾತು ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿತ್ತು. ಅದನ್ನೇ ಅಸ್ತ್ರ ವಾಗಿ ಬಳಕೆ ಮಾಡಿದ್ದ ಬಿಜೆಪಿ ಪ್ರಚಾರದ ಸಮಯದಲ್ಲಿಯೂ ಬಳಕೆ ಮಾಡಿದ್ದರು. ಇದೀಗ ಅಂತಹದ್ದೇ ಮತ್ತೊಂದು ಚಕ್ರವ್ಯೂಹದಲ್ಲಿ ಬೀಳಿಸಲು ರೆಡಿಯಾದಂತಿದೆ.

ಹೌದು, ಕರ್ನಾಟಕ ವಿಧನಾಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇವೆ. ಈ ಬೆನ್ನಲ್ಲೇ ಎಲ್ಲಾ ಪಕ್ಷಗಳು ತಂತ್ರ ರಣ ತಂತ್ರ ಹೂಡುತ್ತಿವೆ. ಇದೀಗ ಸಿದ್ದರಾಮಯ್ಯ ವಿರುದ್ದ ಬಿಜೆಪಿ ತಂತ್ರ ಹೂಡಿದಂತಿದೆ. ಯಾಕಂದ್ರೆ, ಮೈಸೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿ ಆರ್‍ಎಸ್‍ಎಸ್ ಕಮ್ಯುನಲ್ ಅಂದಿದ್ದರು. ಈ ವಿಚಾರ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರವಾಗಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಿ.ಟಿ ರವಿ. ಇವರ ಪ್ರಕಾರ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದವರು ಸೆಲ್ಯುಲರ್ ಗಳು. ಯಾರಿಗೆ ಬೇಕಾದ್ರೂ ಸೆಕ್ಯುಲರ್ ರಿಪೋರ್ಟ್ ಕೊಡ್ತಾರೆ. ಕಮ್ಯುನಲ್ ಯಾರು, ಸೆಕ್ಯುಲರ್ ಯಾರು ಅಂತ ಗೊತ್ತಾಗುತ್ತೆ. ಬಾಂಬ್ ಹಾಕೋರು ಸೆಕ್ಯುಲರ್ ಆಗ್ತಾರೆ. ಇದು ಸಿದ್ದರಾಮಯ್ಯ ಕೊಡೋ‌ ಸರ್ಟಿಫಿಕೇಟ್. ಜಾತ್ಯಾತೀತ ವಾದದ ಮಜವಾದಿಗಳ ಮನಸ್ಸು ಹೊರಗೆ ಬರ್ತಿದೆ. ನಮ್ಮ ಜಾತಿಯವರು ಅಂತ ಹೇಳೋ ಮೂಲಕ ಇವರ ಸೆಕ್ಯುಲರಿಸಂ ಹೊರಗೆ ಬರ್ತಿದೆ‌. ಇನ್ನೊಬ್ಬರನ್ನ ಮುಗಿಸೋ ಹಾಗೂ ತಮ್ಮನ್ನ ರಕ್ಷಿಸಿಕೊಳ್ಳೋದಕ್ಕೆ ಗುರಾಣಿ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಇವರ ಆಡಳಿತ ಅವಧಿಯಲ್ಲಿ ಯಾರು ಉದ್ದಾರ ಆದ್ರು ಅಂತ ರಮೇಶ್ ಕುಮಾರ್ ಅವರಿಗಿಂತ ಹೆಚ್ಚು ಯಾರೂ ಹೇಳಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...