alex Certify ಸಿದ್ದರಾಮಯ್ಯರನ್ನು ʼಗೊಬೆಲಪ್ಪʼ ಎಂದು ಕರೆದ ಹೆಚ್.ಡಿ.ಕೆ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯರನ್ನು ʼಗೊಬೆಲಪ್ಪʼ ಎಂದು ಕರೆದ ಹೆಚ್.ಡಿ.ಕೆ.

ಬೆಳಗಾವಿ : ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ನ್ನು ಮುಳುಗುವ ಹಡಗು ಎಂದು ಕರೆದಿದ್ದಕ್ಕೆ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರಣಿ ಟ್ವಿಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಗದಾಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯರನ್ನು ಬ್ರೋಕರಪ್ಪ ಹಾಗೂ ಗೊಬೆಲಪ್ಪ ಎಂದು ಕರೆದಿದ್ದಾರೆ. ಸಿದ್ದರಾಮಯ್ಯರಿಗೆ ಸುಳ್ಳೇ ದೇವರಾಗಿದೆ. ಅವರು ರಾಜಕೀಯ ಜನ್ಮ ನೀಡಿದ್ದ ಪಕ್ಷದ ವಿರುದ್ಧವೇ ಮಾತನಾಡುವ ಕೃತಘ್ನರು ಎಂದು ಕರೆದಿದ್ದಾರೆ.

ಕ್ರಿಸ್ಮಸ್ ಸಂದರ್ಭದಲ್ಲಿ ಪ್ರೀತಿ ಪಾತ್ರರಿಗೆ ಕಡಿಮೆ ಬೆಲೆಗೆ ನೀಡಿ ಈ ಗಿಫ್ಟ್

ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಊಸರವಳ್ಳಿ ಇದ್ದಂತೆ. ಮೈತ್ರಿ ಸರ್ಕಾರವಿದ್ದಾಗ ಇವರಿಂದಲೇ ಸರ್ಕಾರ ಬಿತ್ತು ಎಂದು ಆರೋಪಿಸಿರುವ ಕುಮಾರಸ್ವಾಮಿ, ನಮ್ಮ ಪಕ್ಷ ಅವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ದೇವರಾಜು ಅರಸು ಅವರಿಗೆ ನರಕದ ವಾತಾವರಣ ತೋರಿಸಿದ್ದ ಸಿದ್ದರಾಮಯ್ಯ, ಇಂದು ಕಾಂಗ್ರೆಸ್ ನ್ನು ಅಧೋಗತಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...