alex Certify ಸಾಲದಿಂದ ಮುಕ್ತರಾಗಬೇಕಿದ್ರೆ ರಾಶಿಗನುಗುಣವಾಗಿ ಮಾಡಿ ಈ ʼಕೆಲಸʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದಿಂದ ಮುಕ್ತರಾಗಬೇಕಿದ್ರೆ ರಾಶಿಗನುಗುಣವಾಗಿ ಮಾಡಿ ಈ ʼಕೆಲಸʼ

ಸಾಲ ಪಡೆಯೋದು ಸುಲಭ. ಆದ್ರೆ ಸಾಲ ಮರುಪಾವತಿ ಮಾಡುವುದು ಸುಲಭದ ಮಾತಲ್ಲ. ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆ ಮಾಡಿಕೊಳ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಲ ಮುಕ್ತವಾಗಲು ಉಪಾಯಗಳನ್ನು ಹೇಳಲಾಗಿದೆ.

ರಾಶಿಗನುಗುಣವಾಗಿ ಕೆಲ ಉಪಾಯಗಳನ್ನು ಅನುಸರಿಸಿದ್ರೆ ಸಾಲದಿಂದ ಮುಕ್ತಿ ಹೊಂದಬಹುದು.

ಮೇಷ ರಾಶಿಯ ಜನರು ಗಣೇಶನನ್ನು ಪೂಜಿಸಬೇಕು. ಗಣಪತಿಗೆ ನಿಯಮಿತವಾಗಿ ಬೆಳಿಗ್ಗೆ ಹೂವುಗಳನ್ನು ಅರ್ಪಿಸಬೇಕು.

ವೃಷಭ ರಾಶಿಯವರು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಪ್ರತಿದಿನ ತಾಯಿ ಲಕ್ಷ್ಮಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು.

ಮಿಥುನ ರಾಶಿಯವರು ಹನುಮಂತನ ಆರಾಧನೆ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹನುಮಾನ್ ಚಾಲಿಸಾ ಪಠಿಸಬೇಕು.

ಕರ್ಕ ರಾಶಿಯವರು ಬಾಳೆ ಗಿಡವನ್ನು ಗುರುವಾರ ಪೂಜಿಸಬೇಕು.

ಸಿಂಹ ರಾಶಿಯವರು ಶನಿವಾರ ಅಶ್ವತ್ಥ ಮರದ ಕೆಳಗೆ ದೀಪ ಹಚ್ಚಬೇಕು.

ಕನ್ಯಾ ರಾಶಿಯವರು ಶಿವನಿಗೆ ನೀರನ್ನು ಅರ್ಪಿಸಬೇಕು.

ತುಲಾ ರಾಶಿಯವರು ಗುರುವಾರ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಹಳದಿ ಬಟ್ಟೆಯನ್ನು ಧರಿಸಬೇಕು.

ವೃಶ್ಚಿಕ ರಾಶಿಯವರು ಮಂಗಳವಾರ ತುಳಸಿ ಎಲೆಯನ್ನು ದೇವರಿಗೆ ಅರ್ಪಿಸಬೇಕು.

ಧನು ರಾಶಿಯವರು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಬೇಕು.

ಮಕರ ರಾಶಿಯವರು ಪ್ರತಿದಿನ ಗಣೇಶನನ್ನು ಪೂಜಿಸಬೇಕು. ಬುಧವಾರ ಹಸಿರು ಏಲಕ್ಕಿ ಅರ್ಪಿಸಬೇಕು.

ಕುಂಭ ರಾಶಿಯವರು ಸೋಮವಾರ ಶಿವಲಿಂಗಕ್ಕೆ ಗಂಗಾಜಲ ಅರ್ಪಿಸಬೇಕು.

ಮೀನ ರಾಶಿಯವರು ಪ್ರತಿ ದಿನ ಸೂರ್ಯನಿಗೆ ನೀರನ್ನು ಅರ್ಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...