alex Certify ಸಭೆಗೆ ನನ್ನನ್ನು ಕರೆದಿಲ್ಲ, ನಾನ್ಯಾಕೆ ಹೋಗ್ಬೇಕು ? ʼಭಾರತ್ ಜೋಡೋʼ ಯಾತ್ರೆ ಸಭೆಗೆ ಹೋಗದಿರಲು ಸಿದ್ದರಾಮಯ್ಯ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಭೆಗೆ ನನ್ನನ್ನು ಕರೆದಿಲ್ಲ, ನಾನ್ಯಾಕೆ ಹೋಗ್ಬೇಕು ? ʼಭಾರತ್ ಜೋಡೋʼ ಯಾತ್ರೆ ಸಭೆಗೆ ಹೋಗದಿರಲು ಸಿದ್ದರಾಮಯ್ಯ ನಿರ್ಧಾರ

ಬೆಂಗಳೂರು: ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಗೆ ತೆರಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನನಗೆ ಸಭೆಗೆ ಕರೆದಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದು, ಪೂರ್ವಭಾವಿ ಸಭೆಗೆ ನನಗೆ ಕರೆದಿಲ್ಲ ಹಾಗಾಗಿ ನಾನ್ಯಾಕೆ ಸಭೆಗೆ ಹೋಗಲಿ ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿರಲಿಲ್ಲ, ನನ್ನ ಕೇಳಿ ಮಾಡಿಲ್ಲ ಸಭೆ ಬಗ್ಗೆ ನನಗೆ ಗೊತ್ತಿಲ್ಲ ಹಾಗಾಗಿ ನಾನ್ಯಾಕೆ ಸಭೆಗೆ ಹೋಗಬೇಕು? ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ಬಗ್ಗೆ ಹೇಳಿದ್ದರು. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಣದೀಪ್ ಸುರ್ಜೆವಾಲಾ ಮೊದಲಾದ ನಾಯಕರು ಸಿದ್ದರಾಮಯ್ಯನವರನ್ನು ಸಮಾಧಾನ ಪಡಿಸಿದ್ದ ಘಟನೆ ಕೂಡ ನಡೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...