alex Certify ಸದ್ಯದ ಅಪ್ಘಾನ್ ಸ್ಥಿತಿ ನೋಡಿದರೆ ಗೊತ್ತಾಗುತ್ತೆ; ಕಾಂಗ್ರೆಸ್ ನೇತೃತ್ವ ಇದ್ದಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು…?; ಸಚಿವ ಸುನೀಲ್ ಕುಮಾರ್ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಯದ ಅಪ್ಘಾನ್ ಸ್ಥಿತಿ ನೋಡಿದರೆ ಗೊತ್ತಾಗುತ್ತೆ; ಕಾಂಗ್ರೆಸ್ ನೇತೃತ್ವ ಇದ್ದಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು…?; ಸಚಿವ ಸುನೀಲ್ ಕುಮಾರ್ ತಿರುಗೇಟು

ಉಡುಪಿ: ಬಿಜೆಪಿ ಹಾಗೂ ತಾಲಿಬಾನ್ ಸಂಸ್ಕೃತಿಗೆ ವ್ಯತ್ಯಾಸವಿಲ್ಲ ಎಂಬ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿರುವ ಸಚಿವ ಸುನೀಲ್ ಕುಮಾರ್, ಜನರ ಭಾವನೆಗಳಿಂದಲೇ ದೂರವಾದವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಸದ್ಯ ಅಪ್ಘಾನಿಸ್ತಾನದ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ನರೇಂದ್ರ ಮೋದಿ ಈ ದೇಶದ ನೇತೃತ್ವ ವಹಿಸದಿದ್ದರೆ ಏನಾಗುತ್ತಿತ್ತು? ಕಾಂಗ್ರೆಸ್ ಆಡಳಿತವಿದ್ದರೆ ದೇಶದ ಸ್ಥಿತಿ ಹೇಗಿರುತ್ತಿತ್ತು? ಎಂಬ ಬಗ್ಗೆ ಜನರು ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ

ಕಾಂಗ್ರೆಸ್ ನವರು ಜನಾಶೀರ್ವಾದ ಯಾತ್ರೆಯನ್ನು ಟೀಕಿಸುತ್ತಿದ್ದಾರೆ. ಆಶೀರ್ವಾದ ಕಳೆದುಕೊಂಡವರು ಈ ರೀತಿ ಮಾತನಾಡುತ್ತಿದ್ದಾರೆ. ಜನ ನಮಗೆ ಕಳೆದ 10 ವರ್ಷಗಳಿಂದ ನಿರಂತರ ಆಶೀರ್ವಾದ ಮಾಡಿದ್ದಾರೆ. ಜನರ ಭಾವನೆಗಳಿಂದ ದೂರವಾಗಿರುವುದರಿಂದ ಕಾಂಗ್ರೆಸ್ ನವರು ಹೀಗೆ ಹೇಳುತ್ತಿದ್ದಾರೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...