alex Certify ಶುಭ ಸುದ್ದಿ: ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನು ಮುಂದೆ ಮಧ್ಯಾಹ್ನವೂ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನು ಮುಂದೆ ಮಧ್ಯಾಹ್ನವೂ ರೈಲು

ಶಿವಮೊಗ್ಗದಿಂದ ಬೆಂಗಳೂರಿಗೆ ಮಧ್ಯಾಹ್ನ ರೈಲಿನ ಸೌಲಭ್ಯ ಇಲ್ಲವೆಂಬ ಕೊರಗು ಈವರೆಗೆ ಕಾಡುತ್ತಿತ್ತು. ಇದೀಗ ಈ ಸೌಲಭ್ಯವೂ ಶಿವಮೊಗ್ಗ ಜಿಲ್ಲೆಯ ಜನತೆಗೆ ಸಿಗುತ್ತಿದ್ದು, ಸೆಪ್ಟೆಂಬರ್ 12ರಿಂದ ನೂತನ ರೈಲು ಸಂಚಾರ ಆರಂಭವಾಗಿದೆ.

ಶಿವಮೊಗ್ಗ – ಯಶವಂತಪುರ – ಬಾಣಸವಾಡಿ ನಡುವೆ ಈ ರೈಲು ಸಂಚರಿಸಲಿದ್ದು, ಶಿವಮೊಗ್ಗ ನಗರವನ್ನು ಮಧ್ಯಾಹ್ನ 1-05 ಕ್ಕೆ ಬಿಡಲಿದೆ. ಸಂಜೆ 5-30ಕ್ಕೆ ತುಮಕೂರನ್ನು ತಲುಪಲಿದ್ದು, ಅಲ್ಲಿಂದ 5-40ಕ್ಕೆ ಹೊರಟು ಸಂಜೆ 6-50 ಕ್ಕೆ ಯಶವಂತಪುರ ತಲುಪಿ 7-40 ಕ್ಕೆ ಬಾಣಸವಾಡಿ ತಲುಪಲಿದೆ.

ಅದೇ ರೀತಿ ಬೆಳಗ್ಗೆ 5-50ಕ್ಕೆ ಬಾಣಸವಾಡಿಯಿಂದ ಹೊರಡುವ ಈ ರೈಲು 6-40ಕ್ಕೆ ಯಶವಂತಪುರ, 7-55 ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ 8-05ಕ್ಕೆ ಬಿಡಲಿರುವ ರೈಲು, ಮಧ್ಯಾಹ್ನ 12-30 ಕ್ಕೆ ಶಿವಮೊಗ್ಗ ತಲುಪಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...