alex Certify ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕಡೂರು ರೈಲು ನಿಲ್ದಾಣದ ಬಳಿ ವಿಡಿಯು ಸಿಸ್ಟಮ್ ಅಳವಡಿಸುತ್ತಿರುವುದರಿಂದ ಡಿ.5 ಮತ್ತು ಡಿ.6 ರಂದು ಜನ  ಶತಾಬ್ದಿ ಸೇರಿದಂತೆ ಕೆಲ ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆಯಾಗಲಿದೆ.

ಈ ಮಾರ್ಗದಲ್ಲಿ ಭಾಗಶಃ ರದ್ದು, ಕೆಲವು ನಿಮಿಷಗಳ ಕಾಲ ತಡವಾಗಿ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರಿಗೆ ಈ ಕುರಿತ ಮಾಹಿತಿ ಇಲ್ಲಿದೆ.

ಶಿವಮೊಗ್ಗ-ಚಿಕ್ಕಮಗಳೂರು ರೈಲು ಭಾಗಶಃ ರದ್ದಾಗಿದೆ. ಕಡೂರಿನ‌ವರೆಗೆ ಈ ರೈಲು ಸಂಚರಿಸಲಿದ್ದು ವಾಪಾಸಾಗಲಿದೆ.

ಡಿಸೆಂಬರ್‌ 6 ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ಜನಶತಾಬ್ದಿ ರೈಲು ಬೆಳಿಗ್ಗೆ 5-15 ಕ್ಕೆ ಬದಲಾಗಿ ಎರಡು ಗಂಟೆಗಳ ಕಾಲ ತಡವಾಗಿ ಅಂದರೆ 7-15 ಕ್ಕೆ ಪ್ರಯಾಣ ಆರಂಭಿಸಲಿದೆ.

ಹಾಗೆಯೇ ತುಮಕೂರು-ಶಿವಮೊಗ್ಗದ ನಡುವೆ ಸಂಚರಿಸುವ ರೈಲು ಡಿ.6 ರಂದು 30 ನಿಮಿಷ ತಡವಾಗಿ ಸಂಚರಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...