alex Certify ಶವದ ಸಮೇತ ಹಳಿ ಮೇಲೆ ಬಿದ್ದ ಕಾರು; ಪೊಲೀಸರ ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಕೃತ್ಯ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವದ ಸಮೇತ ಹಳಿ ಮೇಲೆ ಬಿದ್ದ ಕಾರು; ಪೊಲೀಸರ ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಕೃತ್ಯ ಬಯಲು

ಬೊಲೆರೋ ವಾಹನ ಒಂದು ಹಾಸನ ಜಿಲ್ಲೆಯ ಶಾಂತಿ ಗ್ರಾಮದ ಬಳಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಇದರಲ್ಲಿ ಒಂದು ಶವ ಪತ್ತೆಯಾಗಿತ್ತು. ಅಲ್ಲದೆ ಇದರಲ್ಲಿ ಮೂವರು ಇದ್ದು, ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ ವೇಳೆ ಬೆಚ್ಚಿ ಬೀಳಿಸುವ ಕೃತ್ಯ ಬಯಲಾಗಿದೆ.

ಪ್ರಕರಣದ ವಿವರ: ಶಾಂತಿಗ್ರಾಮದ ಗಾಡೆನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಎಂಬವನನ್ನು ಕೊಲೆ ಮಾಡಿ ಆತನ ಶವವನ್ನು ರೈಲು ಹಳಿ ಮೇಲೆ ಎಸೆದು ಅದನ್ನು ಅಪಘಾತ ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು.

ಹೀಗಾಗಿ ಆಂಧ್ರಪ್ರದೇಶ ಮೆಹಬೂಬ ನಗರದ ರಘು, ಗದಗ ಜಿಲ್ಲೆಯ ಶಶಿ, ಹೊಸಪೇಟೆಯ ರವಿಕುಮಾರ್ ಎಂಬ ಮೂವರು ಆರೋಪಿಗಳು, ಬೊಲೆರೋ ವಾಹನದಲ್ಲಿ ಆನಂದ್ ಶವವನ್ನು ಹಾಕಿಕೊಂಡು ಬಂದಿದ್ದು, ಹಳಿಯ ಮೇಲೆ ಎಸೆಯಲು ಯತ್ನಿಸಿದ ವೇಳೆ ಮೇಲಿನಿಂದ ಉರುಳಿದ ಕಾರು ಶವದ ಸಮೇತ ಹಳಿಯ ಮೇಲೆ ಬಿದ್ದಿತ್ತು.

ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಹಿರಂಗವಾಗಿದೆ. ಅಲ್ಲದೆ ಇವರಿಗೆ ಸಹಕರಿಸಿದ್ದ ಬಾಗಲಕೋಟೆಯ ರಾಜಾ ಪಾಷಾ ಎಂಬವನನ್ನೂ ಪೊಲೀಸರು ಈಗ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...