alex Certify ‘ವಿದ್ಯಾನಿಧಿ’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: 15,000 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನಾಳೆ ನಗದು ನೇರ ವರ್ಗಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಿದ್ಯಾನಿಧಿ’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: 15,000 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನಾಳೆ ನಗದು ನೇರ ವರ್ಗಾವಣೆ

ಶ್ರಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರದಿಂದ, ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆ ಅಡಿ ಯಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕೆ ವಾರ್ಷಿಕ ಶಿಷ್ಯವೇತನ ನೀಡಲಾಗುತ್ತದೆ.

ವಿದ್ಯಾನಿಧಿ ಯೋಜನೆ ಅಡಿ ಪಿಯುಸಿ/ಐಟಿಐ/ಡಿಪ್ಲೋಮೋ ವ್ಯಾಸಂಗ ಮಾಡುವ ಹುಡುಗರಿಗೆ ವಾರ್ಷಿಕ 2,500 ರೂಪಾಯಿ ಹುಡುಗಿಯರು/ಅನ್ಯಲಿಂಗೀಯರಿಗೆ 3,000 ರೂಪಾಯಿ ನೀಡಲಾಗುತ್ತದೆ.

ಹಾಗೆಯೇ ಬಿಎ/ಬಿಎಸ್ಸಿ/ಬಿಕಾಂ ಪದವಿ ಇತ್ಯಾದಿ (ಎಂಬಿಬಿಎಸ್, ಬಿಇ, ಬಿ ಟೆಕ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ) ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ 5,000 ರೂಪಾಯಿ ಹುಡುಗಿಯರು/ಅನ್ಯಲಿಂಗಿಯರಿಗೆ 5,500 ರೂಪಾಯಿ ನೀಡಲಾಗುತ್ತದೆ.

ಇನ್ನು ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳು ಎಲ್.ಎಲ್.ಬಿ./ಪ್ಯಾರಾಮೆಡಿಕಲ್/ಬಿ ಫಾರಂ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ 7,500 ರೂಪಾಯಿ, ಹುಡುಗಿಯರು/ಅನ್ಯಲಿಂಗೀಯರಿಗೆ 8,000 ರೂಪಾಯಿ ನೀಡಲಾಗುತ್ತದೆ.

ಎಂಬಿಬಿಎಸ್/‌ಬಿಇ/ಬಿ ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳು ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ 10,000 ರೂಪಾಯಿ, ಹುಡುಗಿಯರು/ಅನ್ಯಲಿಂಗೀಯರಿಗೆ 11,000 ರೂಪಾಯಿ ನೀಡಲಾಗುತ್ತಿದ್ದು, ದಿನಾಂಕ 23ರ ನಾಳೆ ಬೆಳಗ್ಗೆ 10.30 ಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 15,000 ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...