alex Certify ವರ್ತಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಲಿಂಗ ಸಂಗಾತಿಯಿಂದಲೇ ಜೀವಕ್ಕೆ ಕುತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ತಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಲಿಂಗ ಸಂಗಾತಿಯಿಂದಲೇ ಜೀವಕ್ಕೆ ಕುತ್ತು

ಬೆಂಗಳೂರಿನ ಬಿಟಿಎಂ ಲೇ ಔಟಲ್ಲಿ ನಡೆದಿದ್ದ ವರ್ತಕ ಪ್ರದೀಪ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಲಿಂಗ ಸಂಗಾತಿಯಿಂದಲೇ ಪ್ರದೀಪ್ ಕೊಲೆಯಾಗಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮೇ 30 ರಂದು ಬೆಂಗಳೂರಿನ ಬಿಟಿಎಂ ಲೇಔಟ್ ಮೊದಲ ಹಂತದಲ್ಲಿ ವಾಸವಾಗಿದ್ದ ಮಂಡ್ಯ ಮೂಲದ ಪ್ರದೀಪ್ ಎಂಬವರು ಕೊಲೆಯಾಗಿದ್ದು ಆತನ ಫ್ಲಾಟ್ ನಿಂದ ಬರುತ್ತಿದ್ದ ಕೆಟ್ಟವಾಸನೆ ಗಮನಿಸಿದ ನೆರೆಹೊರೆಯವರು ಜೂನ್ 2ರಂದು ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಾಗಿಲು ಒಡೆದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪ್ ಮೃತದೇಹ ಪತ್ತೆಯಾಗಿತ್ತು.

BREAKING NEWS: ಬೆಂಗಳೂರಿನಲ್ಲಿ ಮತ್ತೊಂದು ಘೋರ ಕೃತ್ಯ; ಪರಿಚಯಸ್ಥನಿಂದಲೇ ಮಹಿಳೆಯ ಮೇಲೆ ಆಸಿಡ್ ದಾಳಿ

ಪ್ರಕರಣ ದಾಖಲಿಸಿಕೊಂಡಿದ್ದ ಮಡಿವಾಳ ಠಾಣೆ ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸಿದ ವೇಳೆ ಮೇ 30 ರ ನಡುರಾತ್ರಿ ವ್ಯಕ್ತಿಯೋರ್ವ ಪ್ರದೀಪ್ ಫ್ಲಾಟ್ ನಿಂದ ಹೊರ ಹೋಗಿರುವುದು ಕಂಡುಬಂದಿತ್ತು. ಹೆಚ್ಚಿನ ತನಿಖೆ ಸಂದರ್ಭದಲ್ಲಿ ಆತ ಆಟೋಚಾಲಕ ರಕ್ಷಿತ್ ಎಂಬ ವಿಚಾರ ತಿಳಿದು ಬಂದಿತ್ತು.

ರಕ್ಷಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಈತ ಪ್ರದೀಪ್ ಜೊತೆ ಸಲಿಂಗ ಸಂಬಂಧ ಹೊಂದಿದ್ದು ಘಟನೆ ನಡೆದ ರಾತ್ರಿ ರಕ್ಷಿತ್ ಮದ್ಯಪಾನ ಮಾಡಿಕೊಂಡು ಬಂದಿದ್ದಕ್ಕೆ ಪ್ರದೀಪ್ ಆಕ್ಷೇಪಿಸಿದ್ದರೆಂದು ಹೇಳಲಾಗಿದೆ. ಆಗ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ರಕ್ಷಿತ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...