alex Certify ಲಕ್ಷ್ಮಿ ಕೃಪೆಗೆ ಪಾತ್ರರಾಗ ಬಯಸುವವರು ಶುಕ್ರವಾರ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿ ಕೃಪೆಗೆ ಪಾತ್ರರಾಗ ಬಯಸುವವರು ಶುಕ್ರವಾರ ಮಾಡಿ ಈ ಕೆಲಸ

ಯಾರು ಲಕ್ಷ್ಮಿ ಕೃಪೆಗೆ ಪಾತ್ರರಾಗ್ತಾರೋ ಆ ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸಿರುತ್ತದೆ. ತಾಯಿ ಲಕ್ಷ್ಮಿ ಕೋಪಗೊಂಡಲ್ಲಿ ಬಡತನ ಮನೆಯನ್ನು ಆವರಿಸುತ್ತದೆ. ಶುಕ್ರವಾರ ಕೆಲವೊಂದು ಸರಳ ಉಪಾಯಗಳನ್ನು ಮಾಡಿದ್ರೆ ಸುಲಭವಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು.

ಯಾರು ಶುಕ್ರವಾರ ಹೊಸ ಬಟ್ಟೆ ಖರೀದಿ ಮಾಡ್ತಾರೋ ಅವರ ಮೇಲೆ ಶುಕ್ರದೇವ ಹಾಗೂ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ಈ ದಿನ ಖರೀದಿ ಮಾಡಿದ ಬಟ್ಟೆ ತುಂಬಾ ಸಮಯ ಬಾಳಿಕೆ ಬರುತ್ತದೆ. ಹೊಸ ಬಟ್ಟೆಗೆ ಶಾಯಿ, ಮಸಿ, ಮಣ್ಣಿನ ಕಲೆ ಬಿದ್ದಲ್ಲಿ ಅದು ಭವಿಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

ತುಲಾ ಹಾಗೂ ವೃಷಭ ರಾಶಿಯ ಗುರು ಶುಕ್ರ, ಶುಕ್ರವಾರ ಈ ರಾಶಿಯವರು ಬಿಳಿ ಹಾಗೂ ಬೆಳ್ಳಿ ಬಣ್ಣದ ವಾಹನ ಖರೀದಿ ಮಾಡಬೇಕು.

ಬೆಳ್ಳಿ ಹಾಗೂ ಬಂಗಾರದ ಪಾತ್ರೆ, ನಾಣ್ಯ, ಆಭರಣ ಖರೀದಿಗೆ ಶುಕ್ರವಾರ ಶುಭ.

ಬಿಳಿ ಬಣ್ಣದ ಬಟ್ಟೆ, ಮಿಠಾಯಿ, ಹಾಲು, ಮೊಸರು, ಸಕ್ಕರೆಯನ್ನು ಮನೆಗೆ ತರುವುದರಿಂದ ಲಕ್ಷ್ಮಿ ಸಂತಸಗೊಳ್ತಾಳೆ.

ಸದಾ ಸುಮಂಗಲಿಯಾಗ ಬಯಸುವವಳು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡೋದು ಹಾಗೂ ದಾನ ಮಾಡೋದು ಶುಭ.

ಹಾಲನ್ನು ಖರೀದಿ ಮಾಡಿ ಶ್ರೀ ಯಂತ್ರಕ್ಕೆ ಅಭಿಷೇಕ ಮಾಡಿ. ನಂತ್ರ ಹಾಲನ್ನು ಇಡೀ ಮನೆಗೆ ಸಿಂಪಡಿಸಿ.

ಮೂವರು ಕನ್ಯೆಯರನ್ನು ಮನೆಗೆ ಕರೆದು ಪಾಯಸವನ್ನು ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...