alex Certify ‘ರೈತ ದಸರಾ’ ಅಂಗವಾಗಿ ಹಾಲು ಕರೆಯುವ ಸ್ಪರ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರೈತ ದಸರಾ’ ಅಂಗವಾಗಿ ಹಾಲು ಕರೆಯುವ ಸ್ಪರ್ಧೆ

ನಾಡಬ್ಬ ದಸರಾವನ್ನು ಈ ಬಾರಿ ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರೈತ ದಸರಾ ಅಂಗವಾಗಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಅಕ್ಟೋಬರ್ 1ರಂದು ಜೆ.ಕೆ. ಮೈದಾನದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಗೋಪಾಲಕರು ಸೆಪ್ಟಂಬರ್ 29 ರಂದು ತಮ್ಮ ಹಸುಗಳೊಂದಿಗೆ ಆಗಮಿಸಿ ನೋಂದಾಯಿಸಬೇಕಾಗಿದೆ.

ಸೆಪ್ಟೆಂಬರ್ 30 ಒಂದು ದಿನ ವಿಶ್ರಾಂತಿ ಇರಲಿದ್ದು, ಅಕ್ಟೋಬರ್ 1ರಂದು ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನ 50,000 ರೂಪಾಯಿ, ದ್ವಿತೀಯ ಬಹುಮಾನ 40,000 ರೂಪಾಯಿ, ತೃತೀಯ ಬಹುಮಾನ 30,000 ರೂಪಾಯಿ ಹಾಗೂ ಸಮಾಧಾನಕರ ಬಹುಮಾನವಾಗಿ 20,000 ರೂಪಾಯಿ ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...