alex Certify ‘ರಾಹುಕಾಲ’ ಮುಗಿದ ಬಳಿಕವೇ ಮತದಾನಕ್ಕೆ ಬಂದ ಜೆಡಿಎಸ್ ಶಾಸಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಹುಕಾಲ’ ಮುಗಿದ ಬಳಿಕವೇ ಮತದಾನಕ್ಕೆ ಬಂದ ಜೆಡಿಎಸ್ ಶಾಸಕರು….!

ಜೆಡಿಎಸ್ ನಾಯಕರು ಯಾವುದೇ ಕಾರ್ಯ ಮಾಡುವ ಸಂದರ್ಭದಲ್ಲಿ ರಾಹುಕಾಲ, ಗುಳಿಕ ಕಾಲವನ್ನು ನೋಡುತ್ತಾರೆ. ಅದರಲ್ಲೂ ಶಾಸಕ ಹೆಚ್.ಡಿ. ರೇವಣ್ಣ ಅಪಾರ ದೈವಭಕ್ತಿ ಹೊಂದಿದ್ದು, ತಾವು ಧಾರ್ಮಿಕ ವಿಧಿ-ವಿಧಾನಗಳನ್ನು ಅನುಸರಿಸುವುದರ ಜೊತೆಗೆ ತಮ್ಮ ಸಹವರ್ತಿಗಳಿಗೆ ಇದರ ಮಾಹಿತಿ ನೀಡುತ್ತಾರೆ.

ರಾಜ್ಯಸಭಾ ಚುನಾವಣೆ ನಡೆಯುತ್ತಿರುವ ಇಂದು ಕೂಡ ಜೆಡಿಎಸ್ ಶಾಸಕರುಗಳು ರಾಹುಕಾಲ ಮುಗಿದ ಬಳಿಕವೇ ಆಗಮಿಸಿದ್ದಾರೆ. 12 ಗಂಟೆಯವರಿಗೆ ರಾಹುಕಾಲ ಇತ್ತೆಂದು ಹೇಳಲಾಗಿದ್ದು, ಹೀಗಾಗಿ ಇದು ಕಳೆದ ಬಳಿಕವೇ ಜೆಡಿಎಸ್ ಶಾಸಕರು ಬಂದಿದ್ದಾರೆ.

ವರ್ತಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಲಿಂಗ ಸಂಗಾತಿಯಿಂದಲೇ ಜೀವಕ್ಕೆ ಕುತ್ತು

ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಅವರು ಕಣಕ್ಕೆ ಇಳಿದಿದ್ದು, ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ಜೆಡಿಎಸ್ ನಾಯಕರು ಇದು ಲಭ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿ ಗೆಲುವಿಗೆ ತಂತ್ರಗಾರಿಕೆ ಹೆಣೆದಿದ್ದು ಸಂಜೆ ಫಲಿತಾಂಶ ಪ್ರಕಟಗೊಂಡ ಬಳಿಕ ಎಷ್ಟರಮಟ್ಟಿಗೆ ಯಶಸ್ಸು ಲಭಿಸಿದೆ ಎಂಬುದು ತಿಳಿದು ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...