alex Certify ರಾಷ್ಟ್ರ ಭಾಷೆ ಚರ್ಚೆ ನಡುವೆ ಪ್ರಶಂಸೆ ಗಳಿಸಿದೆ ಆಯುಷ್ಮಾನ್ ಖುರಾನಾ ಅವರ ‘ಅನೇಕ್’ ಸಂಭಾಷಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ಭಾಷೆ ಚರ್ಚೆ ನಡುವೆ ಪ್ರಶಂಸೆ ಗಳಿಸಿದೆ ಆಯುಷ್ಮಾನ್ ಖುರಾನಾ ಅವರ ‘ಅನೇಕ್’ ಸಂಭಾಷಣೆ..!

ಆಯುಷ್ಮಾನ್ ಖುರಾನಾ ಅವರ ಮುಂಬರುವ ಅನೇಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವ್ಯಾಪಕ ಮನ್ನಣೆ ಗಿಟ್ಟಿಸಿಕೊಂಡಿದೆ. ಇದರಲ್ಲಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ಸಮರದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭುಗಿಲೆದ್ದ ರಾಷ್ಟ್ರೀಯ ಭಾಷೆ ಚರ್ಚೆಯ ನಡುವೆ ನಿರ್ದಿಷ್ಟವಾಗಿ ಒಂದು ದೃಶ್ಯವು ವೈರಲ್ ಆಗುತ್ತಿದೆ.

ಸುದೀಪ್ ಸಂದರ್ಶನವೊಂದರಲ್ಲಿ ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಹೇಳಿಕೆ ನೀಡಿದ ನಂತರ ಅಜಯ್ ಮತ್ತು ಸುದೀಪ್ ನಡುವೆ ಆನ್‌ಲೈನ್ ನಲ್ಲಿ ಪರಸ್ಪರ ವಾದ ಬೆಳೆದಿತ್ತು. ನಂತರ ಅನುವಾದದಲ್ಲಿ ಏನೋ ತಪ್ಪಾಗಿದೆ ಅಂತೇಳಿ ಅಲ್ಲಿಗೆ ಅಜಯ್ ದೇವಗನ್ ವಿವಾದವನ್ನು ತಣ್ಣಗಾಗಿಸಿರೋದು ನಿಮಗೆ ಗೊತ್ತೇ ಇದೆ.

ನಟರಿಬ್ಬರು ತಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ತಾರದೆ ಸುಮ್ಮನಾದ್ರೂ, ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಇದು ತೀವ್ರ ಚರ್ಚೆಗೆ ಕಾರಣವಾಯಿತು. ಇದೀಗ, ಅನೇಕ್ ಟ್ರೇಲರ್‌ನಲ್ಲಿನ ಆಯುಷ್ಮಾನ್ ಅವರ ಸಂಭಾಷಣೆ ಮತ್ತೆ ಇದನ್ನು ನೆನಪು ಮಾಡಿಸಿದೆ.

ಚಿತ್ರದ ಟ್ರೇಲರ್ ನಲ್ಲಿ, ಆಯುಷ್ಮಾನ್‌ ತೆಲಂಗಾಣದ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಾರೆ. ಅವರು ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಮತ್ತು ಪೂರ್ವಭಾವಿ ಕಲ್ಪನೆಗಳು ಬಗ್ಗೆ ಮಾತನಾಡಿದ್ದಾರೆ. ಇದು ಹೃತಿಕ್ ರೋಷನ್ ಮತ್ತು ತಾಪ್ಸಿ ಪನ್ನು ಸೇರಿದಂತೆ ಅನೇಕರಿಂದ ಮೆಚ್ಚುಗೆ ಪಡೆದಿದೆ.

ಈಶಾನ್ಯ ಭಾರತದ ಭದ್ರತೆಗಾಗಿ ಕೆಲಸ ಮಾಡುವ ಒಬ್ಬ ರಹಸ್ಯ ಪೊಲೀಸ್ ಎಂದು ನಟನನ್ನು ಪರಿಚಯಿಸುವುದರೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ಈ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ಗುಂಪುಗಳೊಂದಿಗೆ ವ್ಯವಹರಿಸುವುದು ಅವರ ಕೆಲಸ ಎಂದು ಅವರು ಉಲ್ಲೇಖಿಸಿದ್ದಾರೆ. ನಂತರ ಏನೇನಾಗುತ್ತದೆ ಎಂಬುದು ಸಿನಿಮಾದಲ್ಲಿ ಮೂಡಿಬಂದಿದೆ.

— taapsee pannu (@taapsee) May 5, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...