alex Certify ರಾಮ ನವಮಿಯಂದು ಈ ತರಕಾರಿ ತಿನ್ನುವುದು ಅತ್ಯಂತ ಅಶುಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ ನವಮಿಯಂದು ಈ ತರಕಾರಿ ತಿನ್ನುವುದು ಅತ್ಯಂತ ಅಶುಭ….!

ನವರಾತ್ರಿಯ ಅಷ್ಟಮಿ ಮತ್ತು ನವಮಿ ತಿಥಿಗಳಿಗೆ ಧಾರ್ಮಿಕ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಮಾರ್ಚ್ 29 ಅಷ್ಟಮಿ ತಿಥಿ, ಮಾರ್ಚ್ 30 ನವಮಿ. ನವಮಿಯಂದು ಭಗವಾನ್ ರಾಮನ ಜನ್ಮದಿನವನ್ನು ಸಹ ಆಚರಿಸಲಾಗುತ್ತದೆ, ಆದ್ದರಿಂದಲೇ ಇದನ್ನು ರಾಮ ನವಮಿ ಎಂದು ಕರೆಯಲಾಗುತ್ತದೆ. ಇದರೊಂದಿಗೆ ನವರಾತ್ರಿಯ 9 ದಿನ ಉಪವಾಸ ಮಾಡುವವರು ನವಮಿಯಂದು ಹೆಣ್ಣು ಮಗುವಿಗೆ ಪೂಜೆ ಸಲ್ಲಿಸಿ ನಂತರ ಉಪವಾಸ ಮುರಿಯುತ್ತಾರೆ.

ನವರಾತ್ರಿಯ ಅಷ್ಟಮಿ ಮತ್ತು ನವಮಿ ತಿಥಿಯಂದು ಹಲವು ಬಗೆಯ ಸಾತ್ವಿಕ ಖಾದ್ಯಗಳನ್ನು ತಯಾರಿಸಿ ದೇವಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ಆದರೆ ಈ ದಿನದಂದು ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಒಂದು ವಿಷಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ದೇವರ ಅವಕೃಪೆಗೆ ತುತ್ತಾಗಬಹುದು. ನವರಾತ್ರಿಯ 9 ದಿನಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಇಲ್ಲದಿದ್ದರೆ ಉಪವಾಸ, ಪೂಜೆಯ ಪೂರ್ಣ ಫಲ ಸಿಗುವುದಿಲ್ಲ.

ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲವು ಪದಾರ್ಥಗಳನ್ನು ತಿನ್ನುವುದನ್ನು ಸಹ ನಿಷೇಧಿಸಲಾಗಿದೆ. ಉದಾಹರಣೆಗೆ ಬೆಳ್ಳುಳ್ಳಿ-ಈರುಳ್ಳಿ ಸೇವನೆ ನಿಷಿದ್ಧವಾಗಿದೆ. ಆದರೆ ಇದರ ಹೊರತಾಗಿ ನವಮಿಯ ದಿನ ನಿರ್ದಿಷ್ಟ ತರಕಾರಿಯೊಂದನ್ನು ತಿನ್ನಬಾರದು. ಅದ್ಯಾವುದು ಗೊತ್ತಾ? ಸೋರೆಕಾಯಿ. ನವಮಿಯ ದಿನ ಸೋರೆಕಾಯಿಯನ್ನು ತಿನ್ನಬಾರದು. ಧಾರ್ಮಿಕ ಗ್ರಂಥಗಳ ಪ್ರಕಾರ ನವಮಿಯ ದಿನ ಸೋರೆಕಾಯಿ ತಿನ್ನುವುದು ಗೋಮಾಂಸ ತಿಂದಂತೆ. ಇದು ಅನೇಕ ಜನ್ಮಗಳಿಗೆ ಪಾಪವನ್ನು ಉಂಟುಮಾಡುತ್ತದೆ. ಹಾಗೆಯೇ ಅಷ್ಟಮಿಯ ದಿನದಂದು ತೆಂಗಿನಕಾಯಿಯನ್ನು ತಿನ್ನಬಾರದು ಮತ್ತು ಕೆಂಪು ಬಣ್ಣದ ತರಕಾರಿಗಳನ್ನು ಸೇವನೆ ಮಾಡುವಂತಿಲ್ಲ.

ನವಮಿಯ ದಿನ ದುರ್ಗೆಗೆ ಇವುಗಳನ್ನು ಅರ್ಪಿಸಿ

ನವಮಿಯ ದಿನ ಮಾತೆ ದುರ್ಗೆಗೆ ಪಾಯಸ, ಪೂರಿ, ಕಾಳುಗಳನ್ನು ನೈವೇದ್ಯ ಮಾಡಬೇಕು. ಇದರೊಂದಿಗೆ ಹೆಣ್ಣುಮಕ್ಕಳಿಗೂ ಈ ದಿನ ಅದೇ ರೀತಿಯ ಆಹಾರವನ್ನು ನೀಡಬೇಕು. ಇದಲ್ಲದೆ ನವಮಿಯಂದು ಕರಿಬೇವು, ಪೂರಣಪೌಳಿ, ಭಜ್ಜಿ, ಹಲ್ವಾ, ಕುಂಬಳಕಾಯಿ ಅಥವಾ ಆಲೂಗಡ್ಡೆ ಕರಿ ಮಾಡಬಹುದು. ನವಮಿಯಂದು ದುರ್ಗಾ ಸಪ್ತಶತಿ ಪಾರಾಯಣ ಮಾಡುವುದು ಅತ್ಯಂತ ಮಂಗಳಕರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...