alex Certify ರಾಜಮನೆತನದವರ ಜೊತೆ ಪ್ರಧಾನಿ ಮೋದಿ ಬೆಳಗಿನ ಉಪಹಾರ; ಮೆನುವಿನಲ್ಲಿ ಮೈಸೂರ್‌ ಪಾಕಿಗೂ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಮನೆತನದವರ ಜೊತೆ ಪ್ರಧಾನಿ ಮೋದಿ ಬೆಳಗಿನ ಉಪಹಾರ; ಮೆನುವಿನಲ್ಲಿ ಮೈಸೂರ್‌ ಪಾಕಿಗೂ ಸ್ಥಾನ

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿನಲ್ಲಿ ವಿವಿಧ ಅಭಿವೃದ್ದಿ ಕಾಎರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ನಾಳೆ ಮೈಸೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.

ಇದರ ಮಧ್ಯೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ರವರು ಮೋದಿಯವರನ್ನು ನಾಳೆ ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ್ದು, ರಾಜಮನೆತನದವರ ಜೊತೆ ದಕ್ಷಿಣ ಭಾರತದ ತಿನಿಸುಗಳನ್ನು ಮೋದಿ ಸೇವಿಸಲಿದ್ದಾರೆ.

ಅಲ್ಲದೇ ಕಳೆದ ನಾಲ್ಕು ತಲೆಮಾರುಗಳಿಂದ ರಾಜಮನೆತನಕ್ಕೆ ಮೈಸೂರು ಪಾಕ್‌ ತಯಾರಿಸಿಕೊಡುತ್ತಿರುವ ಕಾಕಾಸುರ ಮಾದಪ್ಪ ಮನೆತನದವರು ಸಿದ್ದಪಡಿಸುವ ಮೈಸೂರ್‌ ಪಾಕನ್ನು ಮೋದಿ ಸವಿಯಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...