alex Certify ಮ್ಯಾಜಿಕ್‌ ಮಾಡಬಲ್ಲದು ಪ್ರತಿನಿತ್ಯ ಒಂದು ಹಸಿ ಈರುಳ್ಳಿ ಸೇವನೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಜಿಕ್‌ ಮಾಡಬಲ್ಲದು ಪ್ರತಿನಿತ್ಯ ಒಂದು ಹಸಿ ಈರುಳ್ಳಿ ಸೇವನೆ…..!

ಭಾರತೀಯ ಅಡುಗೆಮನೆಗಳಲ್ಲಿ ಈರುಳ್ಳಿ ಸರ್ವೇಸಾಮಾನ್ಯ. ಬಹುತೇಕ ಎಲ್ಲರೂ ಅಡುಗೆಗೆ ಈರುಳ್ಳಿ ಬಳಸ್ತಾರೆ. ಈರುಳ್ಳಿ ಇಲ್ಲದ ಭಕ್ಷ್ಯವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆಹಾರದಲ್ಲಿ ಈರುಳ್ಳಿಯನ್ನು ಸೇರಿಸುವುದರಿಂದ ರುಚಿ ಕೂಡ ದುಪ್ಪಟ್ಟಾಗುತ್ತದೆ. ಯಾವುದೇ ಆಹಾರಕ್ಕೆ ಜೀವ ತುಂಬುವ ಕೆಲಸವನ್ನು ಇದು ಮಾಡಬಲ್ಲದು. ಖಾದ್ಯಗಳ ಬಣ್ಣ ಮತ್ತು ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಈರುಳ್ಳಿ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡಬಲ್ಲದು.

ಹಸಿ ಈರುಳ್ಳಿ ಸೇವನೆಯಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು.  ಪ್ರತಿನಿತ್ಯ ಒಂದು ಹಸಿ ಈರುಳ್ಳಿ ಸೇವನೆ ಬಹಳ ಸೂಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು. ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ ಅಥವಾ ಮಧುಮೇಹ ಸಮಸ್ಯೆ ಇರುವವರಿಗೆ ಕೂಡ ಇದು ರಾಮಬಾಣ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ಹಸಿ ಈರುಳ್ಳಿಯನ್ನು ಸೇವಿಸಬೇಕು. ಏಕೆಂದರೆ ಇದು  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಸಕ್ಕರೆ ಕಾಯಿಲೆ ನಮ್ಮ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಹೃದ್ರೋಗಿಗಳು ಕೂಡ ಪ್ರತಿನಿತ್ಯ ಒಂದು ಹಸಿ ಈರುಳ್ಳಿ ಸೇವನೆ ಮಾಡಬಹುದು.ಹಸಿ ಈರುಳ್ಳಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಏಕೆಂದರೆ ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಅಂಶಗಳು ಇದರಲ್ಲಿ ಕಂಡುಬರುತ್ತವೆ.

ಹಸಿ ಈರುಳ್ಳಿ ಕ್ಯಾನ್ಸರ್‌ಗೂ ಪರಿಣಾಮಕಾರಿ ಔಷಧವಿದ್ದಂತೆ. ಈರುಳ್ಳಿಯಲ್ಲಿ ಆ್ಯಂಟಿ ಕಾರ್ಸಿನೋಜೆನಿಕ್ ಗುಣಲಕ್ಷಣಗಳಿವೆ. ಇದು ನಮ್ಮನ್ನು ಕ್ಯಾನ್ಸರ್ ನಿಂದ ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಬಹುದು. ಅನೇಕ ಅಧ್ಯಯನಗಳಲ್ಲಿ ಹಸಿ ಈರುಳ್ಳಿ ಕ್ಯಾನ್ಸರ್‌ಗೆ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ.ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಕೂಡ ಪ್ರತಿದಿನ ಒಂದು ಹಸಿ ಈರುಳ್ಳಿ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...