alex Certify ಮೃತ ಮಹಿಳೆಯನ್ನು ಬೈಕ್‌ ನಲ್ಲಿ ಸಾಗಿಸುತ್ತಿದ್ದ ಹಂತಕರು…! ಅಪಘಾತದ ಬಳಿಕ ಬಯಲಾಯ್ತು ಕೊಲೆ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ಮಹಿಳೆಯನ್ನು ಬೈಕ್‌ ನಲ್ಲಿ ಸಾಗಿಸುತ್ತಿದ್ದ ಹಂತಕರು…! ಅಪಘಾತದ ಬಳಿಕ ಬಯಲಾಯ್ತು ಕೊಲೆ ರಹಸ್ಯ

ರಾಮನಗರ: ಮಹಿಳೆಯ ಕೊಲೆಯನ್ನು ಮರೆಮಾಚಲು ನಾಲ್ವರು ಸೇರಿ ಮಾಡಿದ್ದ ಪ್ಲಾನ್ ಉಲ್ಟಾ ಹೊಡೆದಿದ್ದು, ಉಲ್ಟಾ ಮಾಡಿದ್ದ ನಾಲ್ವರು ಪೊಲೀಸರ ಅತಿಥಿಯಾದ ಘಟನೆ ರಾಮನಗರದಲ್ಲಿ ನಡೆದಿದೆ. ಈ ಘಟನೆ ಅಪಘಾತದ ಮೂಲಕ ಬಯಲಾಗಿರುವುದು ವಿಶೇಷ.

ಮೃತ ಮಹಿಳೆಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ರಾಜರಾಜೇಶ್ವರಿ ನಗರದ ಮುತ್ತುರಾಯನ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ದುರ್ಗಿ, ರಘು, ವಿನೋದ್, ನಾಗರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ರಸ್ತೆಯಲ್ಲಿನ ಗುಂಡಿ ಸಮಸ್ಯೆ ಪರಿಹರಿಸಲು ನೆರವಾಗುತ್ತೆ ಈ ಆಪ್

ಶ್ವೇತಾ ಮತ್ತು ಸ್ನೇಹಿತೆ ದುರ್ಗಿ ನಡುವೆ ನಡೆದ ಹಣದ ವ್ಯವಹಾರದಲ್ಲಿ ಕಲಹ ಉಂಟಾಗಿತ್ತು. ಇದರಿಂದ ದುರ್ಗಿ ತನ್ನ ಪತಿ ರಘು ಜೊತೆ ಸೇರಿ ಶ್ವೇತಾರನ್ನು ಹತ್ಯೆ ಮಾಡಿದ್ದರು. ತದನಂತರ ಹತ್ಯೆಯಾದ ಶ್ವೇತಾಳ ಮೃತದೇಹವನ್ನು ಕೆರೆಗೆ ಎಸೆದು ಪ್ರಕರಣಕ್ಕೆ ಬೇರೊಂದು ತಿರುವು ನೀಡಲು ಯೋಜಿಸಿದ್ದರು. ‌

ಹೀಗಾಗಿ ಬೆಂಗಳೂರಿನ ವಿನೋದ್, ನಾಗರಾಜು ಶವವನ್ನು ಹೊತ್ತು ಬೈಕಿನಲ್ಲಿ ಚನ್ನಪಟ್ಟಣಕ್ಕೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಆಗ, ಪೊಲೀಸರು ಮಹಿಳೆಯ ಶವ ಗುರುತಿಸಿದ್ದಾರೆ. ತದನಂತರ ಮರಣೋತ್ತರ ಪರೀಕ್ಷೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...