alex Certify ಮರ್ಯಾದೆ ಕೊಟ್ಟು ಮಾತನಾಡಿ ಎಂದ ತಾಪ್ಸಿ ಪನ್ನು; ನಟಿ ವರ್ತನೆಗೆ ಪಾಪರಾಜಿಗಳು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರ್ಯಾದೆ ಕೊಟ್ಟು ಮಾತನಾಡಿ ಎಂದ ತಾಪ್ಸಿ ಪನ್ನು; ನಟಿ ವರ್ತನೆಗೆ ಪಾಪರಾಜಿಗಳು ಕಂಗಾಲು

ಬಾಲಿವುಡ್ ಚಿತ್ರರಂಗದಲ್ಲಿ ಪಾಪರಾಜಿಗಳು ನಟ – ನಟಿಯರ ಫೋಟೋಗಾಗಿ ವಿಮಾನ ನಿಲ್ದಾಣ, ಅವರುಗಳ ನಿವಾಸದ ಬಳಿ ಹಗಲು – ರಾತ್ರಿ ಎನ್ನದೆ ಕಾದು ನಿಂತಿರುತ್ತಾರೆ. ಅದರಲ್ಲೂ ಚಿತ್ರರಂಗದ ಯಾವುದೇ ಸಮಾರಂಭವಿದ್ದ ಸಂದರ್ಭದಲ್ಲಿ ಊಟ, ತಿಂಡಿ ಮರೆತು ಒಂದೇ ಒಂದು ಫೋಟೋಗಾಗಿ ಕಾತರಿಸಿ ಕಾಯುತ್ತಾರೆ.

ನಟ – ನಟಿಯರ ಮೂಡ್ ಚೆನ್ನಾಗಿದ್ದರೆ ಪಾಪರಾಜಿಗಳ ಕ್ಯಾಮರಾಗೆ ಒಳ್ಳೆಯ ಪೋಸ್ ಕೊಡುತ್ತಾರೆ. ಆದರೆ ಕೆಲವೊಮ್ಮೆ ಸಿಟ್ಟು ಮಾಡಿಕೊಂಡ ಸಂದರ್ಭದಲ್ಲಿ ಪಾಪರಾಜಿಗಳು ನಿರಾಸೆ ಅನುಭವಿಸುತ್ತಾರೆ. ಇಂಥವುದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು, ‘ನಾಮ್ ಶಬಾನ’ ಖ್ಯಾತಿಯ ನಟಿ ತಾಪ್ಸಿ ಪನ್ನು ಪಾಪರಾಜಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ತಾಪ್ಸಿ ಪನ್ನು ಅವರ ಮುಂಬರುವ ‘ದುಬಾರಾ ಇನ್ ಮುಂಬೈ’ಚಿತ್ರದ ಪ್ರಮೋಷನ್ ಮೇಲೆ ಪಾಪರಾಜಿಗಳು ಫೋಟೋಗಾಗಿ ಕಾಯುತ್ತಿದ್ದರು. ಮೊದಲೇ ತಡವಾಗಿ ಬಂದಿದ್ದ ತಾಪ್ಸಿ ಅವರನ್ನು ನಿರ್ಲಕ್ಷಿಸಿ ಒಳಗಡೆ ಹೋಗಲು ಮುಂದಾಗಿದ್ದಾರೆ. ಇದು ಪಾಪರಾಜಿಗಳಿಗೆ ಬೇಸರ ತರಿಸಿದೆ.

ಅವರಲ್ಲಿ ಒಬ್ಬಾತ ಜೋರಾಗಿ, ನಾವು ನಿಮಗಾಗಿ ಎರಡು ಗಂಟೆಯಿಂದ ಕಾಯುತ್ತಿದ್ದೇವೆ ಎಂದ ವೇಳೆ ತಿರುಗಿಬಿದ್ದ ತಾಪ್ಸಿ ಮರ್ಯಾದೆ ಕೊಟ್ಟು ಮಾತನಾಡಿ ಎಂದಿದ್ದಾರೆ. ಅಲ್ಲದೆ, ಇದರಲ್ಲಿ ನನ್ನ ತಪ್ಪೇನಿದೆ. ನನಗಾಗಿ ಚಿತ್ರತಂಡ ಕಾಯುತ್ತಿದೆ ಹೀಗಾಗಿ ನಾನು ಹೋಗಬೇಕು ಎಂದಿದ್ದಾರೆ ಈ ವಾಗ್ವಾದದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...